
ವಿಜಯಪುರ, 07 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಸಂರಕ್ಷಣೆ ಬಹುಮುಖ್ಯ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲಾದ್ಯಾಂತ 0.17 ರಷ್ಟು ಅರಣ್ಯ ಇತ್ತು. ಇದೀಗ ಎಲ್ಲೆಡೆಗೂ ಮರಗಳನ್ನು ನೆಡುವ ಮೂಲಕ ಅರಣ್ಯ ಪ್ರದೇಶವನ್ನು ಹೆಚ್ಚಿಗೆ ಮಾಡಲಾಗಿದೆ. ಅಲ್ಲದೇ, ಹೆರಿಟೇಜ್ ರನ್ 2025ಕ್ಕೆ ಜನತೆ ಹಾಗೂ ಮಠಾಧೀಶರು ಬೆಂಬಲ ನೀಡುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಕೂಡ ಅರಣ್ಯ ಸಂರಕ್ಷಣೆಗೆ ಅನುದಾನ ನೀಡಿದೆ. ಎಲ್ಲರೂ ಸೇರಿಕೊಂಡು ಅರಣ್ಯವನ್ನು ಉಳಿಸಿ ಬೆಳೆಸಬೇಕು ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande