ನವೆಂಬರ್ 11 ರಂದು ಪರಿಸರ, ಸಾಮಾಜಿಕ ನಿರ್ವಹಣೆ ಜಾಗೃತಿ
ಹೊಸಪೇಟೆ, 08 ನವೆಂಬರ್ (ಹಿ.ಸ.) : ಆ್ಯಂಕರ್ : ಹೂವಿನಹಡಗಲಿಯ ಜಿ.ಬಿ.ಆರ್ ಕಾಲೇಜಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕ ಕೇಂದ್ರ ಮತ್ತು ಆರ್‍ಎಎಂಪಿ ಯೋಜನೆಯಡಿ ವತಿಯಿಂದ ನವೆಂಬರ್.11 ರಂದು ಬೆಳಿಗ್ಗೆ.10 ಗಂಟೆಗೆ ಪರಿಸರ ಮತ್ತು ಸಾಮಾಜಿಕ ನಿರ್ವಹಣೆ (ಇಇಸ್‍ಎಂ) ಬಗ್ಗೆ ಒಂದು ದ
ನವೆಂಬರ್ 11 ರಂದು ಪರಿಸರ, ಸಾಮಾಜಿಕ ನಿರ್ವಹಣೆ ಜಾಗೃತಿ


ಹೊಸಪೇಟೆ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಹೂವಿನಹಡಗಲಿಯ ಜಿ.ಬಿ.ಆರ್ ಕಾಲೇಜಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕ ಕೇಂದ್ರ ಮತ್ತು ಆರ್‍ಎಎಂಪಿ ಯೋಜನೆಯಡಿ ವತಿಯಿಂದ ನವೆಂಬರ್.11 ರಂದು ಬೆಳಿಗ್ಗೆ.10 ಗಂಟೆಗೆ ಪರಿಸರ ಮತ್ತು ಸಾಮಾಜಿಕ ನಿರ್ವಹಣೆ (ಇಇಸ್‍ಎಂ) ಬಗ್ಗೆ ಒಂದು ದಿನದ ಜಾಗೃತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಕಾರ್ಯಗಾರದಲ್ಲಿ ಉದ್ಯಮಿದಾರರಿಗೆ ಕೈಗಾರಿಕಗಳಲ್ಲಿ ಪರಿಸರ ನಿರ್ವಹಣೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೇ ಯಶಸ್ಸಿನ ಕಥೆಗಳನ್ನು ಹಂಚಿಕೊಳ್ಳಲಾಗುತ್ತದೆ.

ತಜ್ಞರು, ಅಧಿಕಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶಗಳನ್ನು ಒದಗಿಸಿ ಕೊಡಲಾಗುತ್ತದೆ. ಈ ಕಾರ್ಯಗಾರದಲ್ಲಿ ಭಾಗವಹಿಸಲು ಆಸಕ್ತಿವುಳ್ಳ ಉದ್ಯಮಿದಾರರು ಭಾಗವಹಿಸಬೇಕೆಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande