
ಗದಗ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ವತಿಯಿಂದ ಬಂಗಾಳಿಯ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ 150 ವರ್ಷ ತುಂಬಿರುವ ವಂದೇ ಮಾತರಂ ಗೀತೆಯ ಸಂಭ್ರಮಾಚರಣೆಯನ್ನು ಗದಗ ನಗರದ ತೋಂಟದಾರ್ಯ ಮಠದ ಎದುರಿಗೆ ಆಚರಿಸಲಾಯಿತು.
ಮಾಜಿ ಸಚಿವರು ಹಾಲಿ ಶಾಸಕರಾದ ಸಿ.ಸಿ.ಪಾಟೀಲ ಭಾಗವಹಿಸಿ ಮಾತನಾಡಿ ಬಂಗಾಳಿಯ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ 150 ವರ್ಷ ತುಂಬಿರುವ ದೇಶಗೀತೆಯಾಗಿರುವ ವಂದೇ ಮಾತರಂ ಅನ್ನು ದೇಶದ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತಗಾಗಿ ಹಾಡಿ ಗೌರವಿಸಬೇಕೆಂದು ಹೇಳಿದರು. ಆ ದೇಶಭಕ್ತಿ ಗೀತೆಯನ್ನು ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಗೌರವಿಸಬೇಕಿದೆ. ದೇಶದ ಸ್ವತಂತ್ರ ಚಳುವಳಿಯಲ್ಲಿ ಅದು ಭಾರಿ ಪ್ರಭಾವವನ್ನು ಬೀರುವ ಮೂಲಕ ದೇಶದಾದ್ಯಂತ ದೇಶಪ್ರೇಮವನ್ನು ಪಸರಿಸಿತ್ತು ಎಂದು ಸ್ಮರಿಸಿದರು.
ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುಜ ಬಾಳಿಕಾಯಿ ಮಾತನಾಡಿ ದೇಶದ ಸ್ವತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರದಲ್ಲಿರುವ ಮಂದಗಾಮಿ ಮತ್ತು ಉಗ್ರಗಾಮಿಗಲಿಗೆ ಪ್ರೇರಣೆ ನೀಡಿರುವ ಗೀತೆ ವಂದೇಮಾತರಂ ಆಗಿತ್ತು, ಬ್ರಿಟಿಷರ ವಿರುದ್ಧ ದೇಶಭಕ್ತರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿರುವ ಗೀತೆಯಾಗುವ ಮೂಲಕ ದೇಶಗೀತೆ ಆಯಿತು. ದೇಶದಲ್ಲಿರುವ ಅನೇಕ ರಾಜಕೀಯ ಪಕ್ಷಗಳಿವೆ, ಆದರೆ ಯಾರು ಆ ಗೀತೆಯನ್ನು ಸ್ಮರಿಸುತ್ತಿಲ್ಲಾ, ಇಂದು ಬಿಜೆಪಿ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿರುವ ಹಿನ್ನಲೆಯಲ್ಲಿ ಸಂಭ್ರಮ ಆಚರಣೆಯ ಮೂಲಕ ಗೌರವ ನೀಡುತ್ತಿದೆ ಎಂದರು.
ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ 150 ವರ್ಷ ತುಂಬಿರುವ ವಂದೇ ಮಾತರಂ ಗೀತೆಯ ಸಂಭ್ರಮಾಚರಣೆಯನ್ನು ಈ ಅಮರ ಗೀತೆಯ 150 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಭಾರತ ಸರ್ಕಾರವು ನವೆಂಬರ್ 07 ರಿಂದ ಒಂದು ವರ್ಷದವರೆಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಪಾಟೀಲ, ಆರ್.ಕೆ.ಚವ್ಹಾಣ, ಪಕ್ಕಿರೇಶ ರಟ್ಟಿಹಳ್ಳಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ಮುಖಂಡರಾದ ಬಿ.ಎಚ್.ಲದ್ವಾ, ತೋಟೊಸಾ ಭಾಂಡಗೆ, ನಾಗರಾಜ ಕುಲಕರ್ಣಿ, ಜಗನ್ನಾಥಸಾ ಭಾಂಡಗೆ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ವಿಜಯಕುಮಾರ ಗಡ್ಡಿ, ರಮೇಶ ಸಜ್ಜಗಾರ, ಸಂತೋಷ ಅಕ್ಕಿ, ನವೀನ ಕೊಟೆಕಲ್, ಮಂಜುನಾಥ ಶಾಂತಗೇರಿ, ಶಂಕರ ಕಾಕಿ, ಸಂಜೀಕುಮಾರ ಖಟವಟೆ, ಪ್ರಶಾಂತ ನಾಯ್ಕರ, ಶಿವು ಹಿರೇಮನಿಪಾಟೀಲ ಉಷಾ ದಾಸರ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮೀ ದಿಂಡೂರ, ಶಶಿಧರ ದಿಂಡೂರ, ವಿನಾಯಕ ಮಾನ್ವಿ, ಚಂದ್ರು ತಡಸದ, ಅನೀಲ ಅಬ್ಬಿಗೇರಿ, ಅಶೋಕ ನವಲಗುಂಡ, ಶ್ರೀಪತಿ ಉಡುಪಿ, ಹಾಗು ಮಹಿಳಾ ಮೋರ್ಚಾ ಎಲ್ಲ ಮುಖಂಡರು ಹಾಗು ಇನ್ನೂ ಹಲವಾರು ಪ್ರಮುಖರುಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP