
ಸಿರುಗುಪ್ಪ, 03 ನವೆಂಬರ್ (ಹಿ.ಸ.) :
ಆ್ಯಂಕರ್ : ಸಿರುಗುಪ್ಪ ಪಟ್ಟಣದ ವಕ್ಫ್ ಸಂಸ್ಥೆಯಾದ ಕೌಲ್ ಬಜಾರ್ ವ್ಯಾಪ್ತಿಯ ವಕ್ಫ್ ಸಂಸ್ಥೆ ದಿವಾನ್ ಎ ಮಸ್ತಾನ್ ದರ್ಗಾ(ಸುನ್ನಿ)ವಕ್ಫ್ ಸಂಸ್ಥೆಗೆ ಹೊಸ ಸಮಿತಿ ರಚಿಸುವ ನಿಮಿತ್ತ ಚುನಾವಣಾ ಪ್ರಕ್ರಿಯೆಯು ನ.04 ರಿಂದ 22 ರವರೆಗೆ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಚುನಾವಣಾ ನಾಮಪತ್ರವನ್ನು ನ.04 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 02.30 ಗಂಟೆಯವರೆಗೆ ಬಳ್ಳಾರಿ ನಗರದ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ನ.10 ರ ಮಧ್ಯಾಹ್ನ 02.30 ರೊಳಗೆ ಸಲ್ಲಿಸಬೇಕು.
ನಾಮಪತ್ರ ಪರಿಶೀಲನೆ ನ.11 ರ ಬೆಳಿಗ್ಗೆ 11.30 ರಿಂದ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.12 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 03 ಗಂಟೆಯ ವರೆಗೆ ಅವಕಾಶ ಇರಲಿದೆ. ಅದೇ ದಿನ ಮಧ್ಯಾಹ್ನ 03.30 ರ ನಂತರ ಚುನಾವಣಾ ಚಿನ್ಹೆಗಳನ್ನು ಹಂಚಿಕೆ ಮಾಡಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
ನ.22 ರ ಶನಿವಾರ ಬೆಳಿಗ್ಗೆ 08 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ಕೌಲ್ ಬಜಾರ್ ದಿವಾನ್ ಎ ಮಸ್ತಾನ್ ದರ್ಗಾ(ಸುನ್ನಿ)ವಕ್ಫ್ ಸಂಸ್ಥೆಗೆ ಚುನಾವಣೆ ನಡೆಸಿ, ಅದೇ ದಿನ ಸಂಜೆ 04 ಗಂಟೆಯಿAದ ಮತ ಎಣಿಕೆ ನಡೆಸಲಾಗುವುದು ಎಂದು ಕೌಲ್ ಬಜಾರ್ ನ ದೀವಾನ್ ಎ ಮಸ್ತಾನ ದರ್ಗಾ(ಸುನ್ನಿ) ಚುನಾವಣಾಧಿಕಾರಿ ಆದ ಕಲಬುರುಗಿ ವಿಭಾಗೀಯ ವಕ್ಫ್ ಅಧಿಕಾರಿ ನೂರ್ ಪಾಷಾ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್