
ಕೊಪ್ಪಳ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಜೆಡಿಎಸ್ ಪಕ್ಷದ ರಾಜ್ಯ ಘಟಕ ಕುಣಿಕೇರಿ ಗ್ರಾಮದ ರಮೇಶ ಮುದಕಪ್ಪ ಡಂಬರಳ್ಳಿ ಅವರನ್ನು ಪಕ್ಷದ ಕೊಪ್ಪಳ ತಾಲೂಕು ಬೂತ್ ಮಟ್ಟದ ಏಜೆಂಟ್-1 (BLA1) ಆಗಿ ನೇಮಕ ಮಾಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ಸುರೇಶ್ ಭೂಮರಡ್ಡಿ ತಿಳಿಸಿದ್ದಾರೆ.
ಚುನಾವಣೆಗಳಲ್ಲಿ ನಿಯೋಜಿತ ಅಧಿಕಾರಿಯಿಂದ ಪಕ್ಷದ ಪರವಾಗಿ ಮತದಾರರ ಪಟ್ಟಿಯನ್ನು ಸ್ವೀಕರಿಸುವ ಜೆಡಿಎಸ್ ಬೂತ್ ಮಟ್ಟದ ಏಜೆಂಟರ ವಿವರಗಳನ್ನು ತಿಳಿಸುವ ಅಧಿಕಾರವನ್ನು ಡಂಬರಳ್ಳಿ ಅವರಿಗೆ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್