


ಗದಗ, 01 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ನಾನಾ ದಳಗಳ ವೀಕ್ಷಣೆ ಮಾಡಿದರು.
ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಾಯಕತ್ವವನ್ನು ಲಷ್ಟಪ್ಪ ತಳವಾರ ವಹಿಸಿದ್ದರು. ನಾಗರಿಕ ಪೊಲೀಸ ಪಡೆಯ ನೇತೃತ್ವವನ್ನು ಸುಭಾಷ ಪಾಟೀಲ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ. ಎನ್ ವಸ್ತçದ, ಅಗ್ನಿ ಶಾಮಕ ಪಡೆಯ ನೇತೃತ್ವನ್ನು ಮಂಜುನಾಥ ಮೇಲ್ಮನಿ, ಅಬಕಾರಿ ಇಲಾಖೆಯ ಶ್ರೀಮತಿ ಆಶಾರಾಣಿ, ಅರಣ್ಯ ಪಡೆಯ ಸಚಿನ್ ಬಿಸನಹಳ್ಳಿ, ಎನ್.ಸಿ.ಸಿ. ಸೀನಿಯರ್ ಬಾಯ್ಸ್ ದಳದ ನೇತೃತ್ವವನ್ನು ಆಕಾಶ್ ಎಸ್.ಕೆ, ಸೇವಾ ದಳದ ನೇತೃತ್ವವನ್ನು ಎಸ್.ಎಂ. ಕೃಷ್ಣಾ ಪ್ರೌಢಶಾಲೆಯ ಕು. ಆಯೇಶಾ, ವಿ.ಡಿ.ಎಸ್. ಗರ್ಲಸ್ ಹೈಸ್ಕೂಲ್ ಶಾಲೆಯ ನೆತೃತ್ವವನ್ನು ಆಕಾಂಕ್ಷಾ , ಸೇಂಟ್ ಜಾನ್ ಪ್ರಾಥಮಿಕ ಶಾಲೆಯ ಪವನ ವಡವಳ್ಳಿ, ಮಾಜಿ ಸೈನಿಕ ತಂಡದ ಬಸವರಾಜ ಮುಂಡರಗಿ, ಎಸ್.ಎಂ. ಕೃಷ್ಣ ಪ್ರಾಥಮಿಕ ಶಾಲೆಯ ಕು. ಮುಸ್ಕಾನ್ ಬಾನು, ಕೆವಿಎಸ್ಆರ್. ಪ್ರೌಢಶಾಲೆಯ ಕು. ಸ್ಪಂದನಾ, ಸೇಂಟ್ ಜಾನ್ ಬಾಲಕರ ಪ್ರೌಢಶಾಲೆಯ ಪವನ ಸಿಂಗ ದೊಡ್ಡಮನಿ, ಎನ್ಸಿಸಿ ಸೀನಿಯರ್ ಗರ್ಲ್ಸ ತಂಡದ ನೇತೃತ್ವವನ್ನು ಸ್ಪೂರ್ತಿ ಅವರು ವಹಿಸಿದ್ದರು.
ಪಥ ಸಂಚಲನದಲ್ಲಿ ಇಲಾಖಾವಾರು ನಗರದ ಅಗ್ನಿಶಾಮಕ ಘಟಕ, ಅಬಕಾರಿ ತಂಡ, ಗೃಹ ರಕ್ಷಕ ದಳ, ಶಾಲಾವಾರು ಎಸ್.ಎಂ.ಕೃಷ್ಣ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಟಗೇರಿಯ ಸೇಂಟ್ ಜಾನ್ ಬಾಲಕರ ಪ್ರೌಢಶಾಲೆ, ವಿಡಿಎಸ್ ಟಿ ಬಾಲಕಿಯರ ಪ್ರೌಢಶಾಲೆಗಳು ಕ್ರಮವಾಗಿ ಪ್ರಥಮ, ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಸ್ತಬ್ದ ಚಿತ್ರ ಪ್ರದರ್ಶನದಲ್ಲಿ 9 ಇಲಾಖೆಯ ಸ್ತಬ್ದ ಚಿತ್ರಗಳು ಪಾಲ್ಗೊಂಡಿದ್ದು ಆ ಪೈಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ, ಕೆ ಎಸ್ ಆರ್ ಟಿ ಸಿ ದ್ವಿತೀಯ ಹಾಗೂ ಶಿಕ್ಷಣ ಇಲಾಖೆ ತೃತೀಯ ಸ್ಥಾನ ಪಡೆದರು.
70ನೆಯ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಮಾರಂಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಸೇರಿದಂತೆ ಇತರೆ ಗಣ್ಯರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡರು.
ಕಲೆ, ಸಾಹಿತ್ಯ , ಸಾಮಾಜಿಕ , ಆಡಳಿತ,ಕೃಷಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ : ಗದಗ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ಎ.ಎಸ್.ಮಕಾನದಾರ, ವಿವೇಕಾನಂದ ನಗರದ ಶ್ರೀಮತಿ ಜ್ಯೋತಿ ಎಂ. ಲೋಣಿ, ಮೌಲಾನಾ ಅಲ್ಲಾ ಭಕ್ಷ್ಯ ಹುಸೇನಸಾಬ ಪಲ್ಲೇದ, ಮುಂಡರಗಿ ತಾಲೂಕಿನ ನಾಗರಹಳ್ಳಿಯ ಬ್ರಹ್ಮಾನಂದ ಕಲಕೇರಿ, ದೇವಿಂದ್ರಪ್ಪ ಹ ಬಡಿಗೇರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರಡಿ, ಜಿಲ್ಲಾ ಪೊಲೀಸ ಕಾರ್ಯಾಲಯದ ಆರ್.ಎಸ್.ಐ, ಗುರುರಾಜ ಮಹಾದೇವಪ್ಪ ಬೂದಿಹಾಳ.
ಪತ್ರಿಕೋದ್ಯಮ/ ಮಾಧ್ಯಮ ವಿಭಾಗ: ಪತ್ರಿಕೋದ್ಯಮ / ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ವೆರಿಗುಡ್ ಮಾರ್ನಿಂಗ್ ದಿನಪತ್ರಿಕೆ ದೇವಪ್ಪ ಲಿಂಗಧಾಳ, ಉತ್ತರ ಪ್ರಭ ಪ್ರಾದೇಶಿಕ ದಿನಪತ್ರಿಕೆ ಸಂಪಾದಕಿ ಶ್ರೀಮತಿ ಲಕ್ಷ್ಮೀ ಬಾಯಿ ರವಿಕಾಂತ ಅಂಗಡಿ, ಮುಳಗುಂದದ ವಿಜಯ ಕರ್ನಾಟಕ ವರದಿಗಾರರಾದ ವೀರಪ್ಪ ಸಿದ್ದನಗೌಡ, ಗಜೇಂದ್ರಗಡ ತಾಲೂಕು ಉದಯವಾಣಿ ವರದಿಗಾರ ಡಿ.ಜಿ. ವೋಮಿನ್ , ಲಕ್ಷ್ಮೇಶ್ವರ ತಾಲೂಕು ವಿಜಯ ವಾಣಿ ವರದಿಗಾರ ಮಲ್ಲು ಕಳಸಾಪುರ, ನರಗುಂದ ತಾಲೂಕು ಸಂಯುಕ್ತ ಕನಾಟಕ ವರದಿಗಾರ ಉಮೆಶ ಬೋಳಶೆಟ್ಟಿ , ಶಿರಹಟ್ಟಿ ತಾಲೂಕು ಸಂಜೆ ವಾಣಿ ವರದಿಗಾರ ಪ್ರಕಾಶ ಮೇಟಿ, ರೋಣ ತಾಲೂಕು ಹೊಳೆ ಆಲೂರ ಹೋಬಳಿ ವಿಜಯವಾಣಿ ವರದಿಗಾರ ವೀರಯ್ಯ ವಸ್ತçದ, ಮುಂಡರಗಿ ತಾಲೂಕು ಉದಯವಾಣಿ ವರದಿಗಾರ ಹು.ಬಾ.ವಡ್ಡಟ್ಟಿ, ವಿಶ್ವವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಮಾಳಿಂಗರಾಯ ಪೂಜಾರ, ಹಸಿರುಕ್ರಾಂತಿ ಜಿಲ್ಲಾ ವರದಿಗಾರ ಮೌನೇಶ ಬಡಿಗೇರ.
ಕ್ರೀಡೆ ಮತ್ತು ಶಿಕ್ಷಣ ವಿಭಾಗ : ಮುಂಡರಗಿ ತಾಲೂಕು ಮುರಡಿ ತಾಂಡಾದ ರಮೇಶ ಬೂದಿಹಾಳ , ಗದಗ ಎ.ಎಸ್.ಎಸ್.ಕಾಮರ್ಸ ಕಾಲೇಜಿನ ಕು.ಗುರುಪ್ರಸಾದ ಸೊನ್ನದ, ಜೆ.ಟಿ.ಕಾಲೇಜಿನ ಕು. ಜ್ಞಾನೇಶ್ವರ ಗಾಯಕವಾಡ, ಗೊಜನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕು. ಪುನೀತರೆಡ್ಡಿ, ಹುಲಕೋಟಿಯ ರಾಜೇಶ್ವರಿ ವಿದ್ಯಾನಿಕೇತನದ ಶ್ರೀನಿವಾಸ ಆರ್. ಗುಳಗಂದಿ, ಕು. ಸಂಭ್ರಮ ವಿ. ವಜ್ಜರಮಟ್ಟಿ, ಕು. ಕೃಪಾ ರೊಟ್ಟಿಗವಾಡ, ಕು. ನಿಖಿತಾ ವಿ.ಹೆಬಸೂರು, ರೋಶನಿ ವಿ ಬಹದ್ದೂರಬಂಡಿ, ಗದಗ ಕ್ರೀಡಾ ವಸತಿ ನಿಲಯದ ಭಾಗ್ಯಾ ಕುಬೇರಪ್ಪ ಮೇಲ್ಮನಿ, ವೀರೇಶಯಲ್ಲಪ್ಪ ಶಿವಾನಂದ ಯಲಪ್ಪ , ಅರ್ಚನಾ ಫಕೀರಗೌಡ ಹಟ್ಟಿ, ಮುಳಗುಂದದ ಯಮನೂರಸಾಬ ದೊಡ್ಡಮನಿ,ಸಂಗಮೇಶ ಸಜ್ಜನ, ಹಿರೇಕೊಪ್ಪದ ದೀಪಾ ದಪ್ತಾರದಾರ.
ಉಪಸ್ಥಿತಿ: ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ,ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ,ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಎಸಿ ಗಂಗಪ್ಪ ಎಂ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP