ಸ್ವಾತಂತ್ರ್ಯ ಹೋರಾಟದಲ್ಲಿ ಸಹಸ್ರಾರ್ಜುನ ಸಮುದಾಯದ ಪಾತ್ರ ದೊಡ್ಡದು : ಬಸವರಾಜ ಬೊಮ್ಮಾಯಿ
ಗದಗ, 29 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕ್ಷತ್ರಿಯ ಗುಣಗಳಿರುವ ಸಹಸ್ರಾರ್ಜುನ ಸಮಾಜ ಸ್ನೇಹಕ್ಕೂ ಸಿದ್ದ ಸಮರಕ್ಕೂ ಬದ್ಧ ಎನ್ನುವ ತತ್ವ ಹೊಂದಿದ್ದು, ಸ್ವತಂತ್ರ ಹೋರಾಟದಲ್ಲಿ ಈ ಸಮಾಜದ ಪಾತ್ರ ದೊಡ್ಡದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗದಗ ನಗರದ ಹಳೇ ಸರಾಫ
ಫೋಟೋ


ಗದಗ, 29 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕ್ಷತ್ರಿಯ ಗುಣಗಳಿರುವ ಸಹಸ್ರಾರ್ಜುನ ಸಮಾಜ ಸ್ನೇಹಕ್ಕೂ ಸಿದ್ದ ಸಮರಕ್ಕೂ ಬದ್ಧ ಎನ್ನುವ ತತ್ವ ಹೊಂದಿದ್ದು, ಸ್ವತಂತ್ರ ಹೋರಾಟದಲ್ಲಿ ಈ ಸಮಾಜದ ಪಾತ್ರ ದೊಡ್ಡದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗ ನಗರದ ಹಳೇ ಸರಾಫ ಬಜಾರನಲ್ಲಿ ಶ್ರೀ ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಶ್ರೀ ಅಂಭಾಭವನಿ ದೇವಿಯ ದರ್ಶನ ಪಡೆದು ಮಾತನಾಡಿದರು.

ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜನ್ಮ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಸಹಸ್ರಾರ್ಜುನ ಅವತಾರ ನೂರು ಅರ್ಜುನರನ್ನು ಕಾಣುವ ಶಕ್ತಿ ಹೊಂದಿದೆ. ಈ ಸಮುದಾಯ ಉತ್ತರ ಭಾರತದಿಂದ ಬಂದು ಅಲ್ಲಿಂದ ದಕ್ಷಿಣದಲ್ಲಿ ನೆಲೆಸಿ ರಾಜ್ಯದ ಬಾಗಲಕೋಟೆ, ಬಿಜಾಪುರ, ಹುಬ್ಬಳ್ಳಿ ಧಾರವಾಡ, ಗದಗ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ ಎಂದರು.

ಕ್ಷತ್ರಿಯ ಗುಣಗಳಿರುವ ಸಹಸ್ರಾರ್ಜುನ ಸಮಾಜ ಸ್ನೇಹಕ್ಕೂ ಸಿದ್ದ ಸಮರಕ್ಕೂ ಬದ್ಧ ಎನ್ನುವ ತತ್ವ ಹೊಂದಿದ್ದು, ಸ್ವತಂತ್ರ ಹೋರಾಟದಲ್ಲಿ ತಮ್ಮ ಪಾತ್ರ ದೊಡ್ಡದು. ಗದಗಿನ ಸಹಸ್ರಾರ್ಜುನ ಸಮಾಜದ ಮುಖಂಡರು ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದಾರೆ. ಮಹಾತ್ಮಾಗಾಂಧಿಯವರು ಗದಗನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಬಂದು ತೆರಳುವಂತೆ ನೋಡಿಕೊಂಡಿದ್ದರು. ಈ ಸಮಾಜಕ್ಕೆ ಸೇರಿದವರು ಶಕ್ತಿಸಾಲಿ, ನ್ಯಾಯ, ಪ್ರೀತಿಗೆ ಹೆಸರು ವಾಸಿ ಎಂದರು.

ಇತ್ತೀಚಿನ ದಿನಗಳಲ್ಲಿ ರೇಷ್ಮೆಯ ಕೆಲಸ ಮಾಡುವ ಉದ್ಯೋಗದಲ್ಲಿ ತೊಡಗಿಸಿಕೊಂಡು ಬಹಳ ದೊಡ್ಡ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಸಹಸ್ರಾರ್ಜುನನ ಆಶಿರ್ವಾದ ಈ ಸಮುದಾಯದ ಮೇಲೆ ಇದೆ. ಎಲ್ಲರಿಗೂ ಶುಭವಾಗಲಿ, ತಾಯಂದಿರಿಗೆ ಯುವಕರಿಗೆ ಸಹಸ್ರ ಸಹಸ್ರ ಆಶೀರ್ವಾದ ಈ ಸಮುದಾಯಕ್ಕೆ ಸಿಗಲಿ ಎಂದು ಆಶಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande