ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಪಾಟೀಲ ಅಸಮಾಧಾನ
ವಿಜಯಪುರ, 27 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮುಖ್ಯಮಂತ್ರಿಗಳು ಬಂದು ಒಂದು ತಿಂಗಳಾಯಿತು, ಅತಿವೃಷ್ಟಿಯಿಂದಾಗಿ ಲಕ್ಷಾಂತರ ಹೆಕ್ಟೇರ ಬೆಳೆ ಹಾನಿಯಾಗಿದೆ, ಹಾನಿಗೀಡಾಗಿರುವ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮಾತು ಇನ್ನೂ ಈಡೇರಿಕೆಯಾಗಿಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ವ
ಪಾಟೀಲ


ವಿಜಯಪುರ, 27 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿಗಳು ಬಂದು ಒಂದು ತಿಂಗಳಾಯಿತು, ಅತಿವೃಷ್ಟಿಯಿಂದಾಗಿ ಲಕ್ಷಾಂತರ ಹೆಕ್ಟೇರ ಬೆಳೆ ಹಾನಿಯಾಗಿದೆ, ಹಾನಿಗೀಡಾಗಿರುವ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮಾತು ಇನ್ನೂ ಈಡೇರಿಕೆಯಾಗಿಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಲ್ಲ ಸಲ್ಲದ ವಿಷಯಗಳೇ ಚರ್ಚೆಯಾಗುತ್ತಿವೆ, ಅವುಗಳಿಗೆ ಯಾವ ಆದ್ಯತೆ ದೊರಕಬಾರದು, ರೈತರ ವಿಷಯಕ್ಕೆ ಮೊದಲು ಸ್ಪಂದನೆ ದೊರಕಲಿ, ನೀಡಿದ ಮಾತಿನಂತೆ ರೈತರಿಗೆ ಪರಿಹಾರ ಒದಗಿಸಿ ಎಂದರು.

ಗ್ಯಾರಂಟಿ ಹಾಗೂ ಉಚಿತ ಯೋಜನೆಗಳ ಪ್ರಯೋಜನ ಬಹಳಷ್ಟಿದೆ, ಅದರಿಂದ ಉಪಯೋಗವಾಗಿಲ್ಲ ಎಂದಲ್ಲ, ಅನೇಕರಿಗೆ ಇದು ಅತ್ಯಂತ ಅನುಕೂಲವಾಗಿವೆ, ಇದರಿಂದ ಅಭಿವೃದ್ಧಿಗೆ ಕೊಂಚ ಹಿನ್ನೆಡೆಯಾಗಿರಬಹುದು ಇದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

ಸಚಿವ ಸ್ಥಾನ ಆಸೆ ಪಟ್ಟಿಲ್ಲ - ನಾನು ೨೪ ಕ್ಯಾರೆಟ್ ಕಾಂಗ್ರೆಸ್ಸಿಗ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಸಚಿವ ಸ್ಥಾನ ದೊರಕಿಲ್ಲ, ಸಚಿವ ಸ್ಥಾನ ಕೊರತೆ ನೀಗಬೇಕು ಎಂದು ಜನರ ಆಶಯ. ಈ ಹಿಂದೆ ಅನೇಕರು ಒಂದೇ ಬಾರಿ ಶಾಸಕರಾಗಿದ್ದರೂ ಅವರಿಗೆ ಸಚಿವ ಸ್ಥಾನ ದೊರಕಿತು, ಆದರೆ ಇಂಡಿ ಕ್ಷೇತ್ರ ಸಚಿವ ಸ್ಥಾನದಿಂದ ವಂಚಿತವಾಗುತ್ತಲೇ ಇದೆ. ಮೊನ್ನೆ ಮುಖ್ಯಮಂತ್ರಿಗಳು ಬಂದಾಗ ನನ್ನ ಕ್ಷೇತ್ರದ ಜನತೆ ಸಚಿವ ಸ್ಥಾನದ ಬೇಡಿಕೆ ಮಂಡಿಸುವ ಆಶಯ ವ್ಯಕ್ತಪಡಿಸಿದಾಗ ನಾನೇ ಅವರನ್ನು ಕೈ ಮುಗಿದು ತಡೆದಿರುವೆ, ನಾನು ಡಿಗ್ನೈಫೈ ರಾಜಕಾರಣಿ, ೨೪ ಕ್ಯಾರೆಟ್ ಶುದ್ದ ಕಾಂಗ್ರೆಸ್ಸಿಗ, ೨೨ ಕ್ಯಾರೇಟ್ ಅಲ್ಲ ಶುದ್ಧ ೨೪ ಕ್ಯಾರೇಟ್ ಕಾಂಗ್ರೆಸ್ಸಿಗ, ಅಗ್ರಗಣ್ಯ ನಾಯಕರು ಸಚಿವ ಸ್ಥಾನದ ಭರವಸೆ ನೀಡಿದ್ದಾರೆ ನೋಡೋಣ ಏನಾಗುತ್ತದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande