ನೀರನ್ನು ಕುದಿಸಿ, ಆರಿಸಿ ಕುಡಿಯಲು ಪಾಲಿಕೆ ಆಯುಕ್ತರ ಮನವಿ
ದಾವಣಗೆರೆ, 26 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚೆಗೆ ಆಗುತ್ತಿರುವ ಮಳೆಯಿಂದಾಗಿ ರಾಜನಹಳ್ಳಿ ಗ್ರಾಮದ ಬ್ಯಾರೇಜ್ ಹತ್ತಿರ ಇರುವ ಜಾಕ್‍ವೆಲ್‍ನಲ್ಲಿ ತುಂಗಾಭದ್ರ ನದಿಯ ನೀರಿನ ಮಟ್ಟವು ಹೆಚ್ಚಾಗಿದ್ದು, ನದಿಯ ನೀರು ಕೆಸರಿನಿಂದ ಕೂಡಿರುತ್ತದೆ. ಆದ್ದರಿಂದ ನೀರು ಶುದ್ದೀಕರಿ
ನೀರನ್ನು ಕುದಿಸಿ, ಆರಿಸಿ ಕುಡಿಯಲು ಪಾಲಿಕೆ ಆಯುಕ್ತರ ಮನವಿ


ದಾವಣಗೆರೆ, 26 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚೆಗೆ ಆಗುತ್ತಿರುವ ಮಳೆಯಿಂದಾಗಿ ರಾಜನಹಳ್ಳಿ ಗ್ರಾಮದ ಬ್ಯಾರೇಜ್ ಹತ್ತಿರ ಇರುವ ಜಾಕ್‍ವೆಲ್‍ನಲ್ಲಿ ತುಂಗಾಭದ್ರ ನದಿಯ ನೀರಿನ ಮಟ್ಟವು ಹೆಚ್ಚಾಗಿದ್ದು, ನದಿಯ ನೀರು ಕೆಸರಿನಿಂದ ಕೂಡಿರುತ್ತದೆ. ಆದ್ದರಿಂದ ನೀರು ಶುದ್ದೀಕರಿಸಿ ಪೂರೈಕೆ ಮಾಡಿದ್ದರೂ ಕಡ್ಡಾಯವಾಗಿ ಕುದಿಸಿ, ಆರಿಸಿದ ನೀರನ್ನು ಕುಡಿಯಲು ಉಪಯೋಗಿಸಬೇಕು. ಹಾಗೂ ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande