ಛಲವಾದಿ ನಾರಾಯಣಸ್ವಾಮಿ ವಿರುದ್ದ ಸಚಿವ ಭೋಸರಾಜು ಆಕ್ರೋಶ
ಬೆಂಗಳೂರು, 25 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಛಲವಾದಿ ನಾರಾಯಣಸ್ವಾಮಿ ಅವರೇ, ನಿಮ್ಮನ್ನೂ ಒಳಗೊಂಡತೆ ಈ ನಾಡಿನ ಎಲ್ಲಾ ಸಮುದಾಯದ ಮುಖಂಡರನ್ನು ಬೆಳಸುವಲ್ಲಿ ಹಾಗೂ ಅವರಿಗೆ ಉತ್ತಮ ಸ್ಥಾನಮಾನ ದೊರಕಿಸಿಕೊಡುವಲ್ಲಿ ಮಲ್ಲಿಕಾರ್ಜುನ ಖರ್ಗೇ ಹಾಗೂ ಅವರ ಕುಟುಂಬದ ಪಾತ್ರ ಹಿರಿದು. ಬದಲಾದ ರಾಜಕೀಯ ಸನ್ನಿವೇ
Bosraju


ಬೆಂಗಳೂರು, 25 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಛಲವಾದಿ ನಾರಾಯಣಸ್ವಾಮಿ ಅವರೇ, ನಿಮ್ಮನ್ನೂ ಒಳಗೊಂಡತೆ ಈ ನಾಡಿನ ಎಲ್ಲಾ ಸಮುದಾಯದ ಮುಖಂಡರನ್ನು ಬೆಳಸುವಲ್ಲಿ ಹಾಗೂ ಅವರಿಗೆ ಉತ್ತಮ ಸ್ಥಾನಮಾನ ದೊರಕಿಸಿಕೊಡುವಲ್ಲಿ ಮಲ್ಲಿಕಾರ್ಜುನ ಖರ್ಗೇ ಹಾಗೂ ಅವರ ಕುಟುಂಬದ ಪಾತ್ರ ಹಿರಿದು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆರ್ ಎಸ್ ಎಸ್ ಅನ್ನು ಮುಂದಿಟ್ಟುಕೊಂಡು ತಮ್ಮ ಅಸ್ತಿತ್ವಕ್ಕಾಗಿ, ಬೇಳೆ ಬೇಯಿಸಿಕೊಳ್ಳುತ್ತಿರುವುದು ನೀವು. ಖರ್ಗೆ ಅವರ ವಿರುದ್ಧ ತಾವು ಆಡಿರುವ ಮಾತುಗಳು ನಿಮಗೆ ಶೋಭೆ ತರುವುದಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಿಯಾಂಕ ಖರ್ಗೆ ಅವರು ಎಷ್ಟು ಜನ ದಲಿತರನ್ನು ಗುತ್ತಿಗೆದಾರರನ್ನಾಗಿ ಮಾಡಿದ್ದಾರೆ. ಎಷ್ಟು ದಲಿತ ಅಭ್ಯರ್ಥಿಗಳಿಗೆ ನೌಕರಿ ಕೊಡಿಸಿದ್ದಾರೆ ಬೆಳಿಸಿದ್ದೀರಿ ಎಂದು ಪ್ರಶ್ನಿಸಿರುವ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸಚಿವ ಭೋಸರಾಜು ಎದಿರೇಟು ನೀಡಿದ್ದಾರೆ.

ಪಕ್ಷ ಬದಲಾಯಿಸಿ ವೈಯುಕ್ತಿಕ ಲಾಭಕ್ಕಾಗಿ ಈ ರೀತಿ ಮನಬಂದಂತೆ ದೂಷಿಸುವುದು ಸರಿಯಲ್ಲ. ಛಲವಾದಿ ನಾರಾಯಣಸ್ವಾಮಿ ಅವರು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದಕ್ಕೆ ಖರ್ಗೇ ಅವರ ಕುಟುಂಬದ ಪಾತ್ರ ಬಹಳ ಹಿರಿದು. ಈ ಸತ್ಯವನ್ನು ಮರೆಮಾಚಿ, ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ರೀತಿ ಹೇಳಿಕೆ ನೀಡುತ್ತಿರುವುದು ನಾರಾಯಣಸ್ವಾಮಿ ಅವರಿಗೆ ಶೋಭೆ ತರುವುಂತದ್ದಲ್ಲ. ಸಾವಿರಾರು ಸಂಖ್ಯೆಯಲ್ಲಿ ಇವತ್ತು ದಲಿತರು ಸೇರಿದಂತೆ ರಾಜ್ಯದ ಎಲ್ಲ ಸಮುದಾಯಗಳ ಮುಖಂಡರನ್ನು, ನಾಯಕರನ್ನು ಪೋಷಿಸಿ, ಬೆಳೆಸಿದವರು ಖರ್ಗೇ. ಕಳೆದ 50 ವರ್ಷಗಳ ಸುದೀರ್ಘ ತಮ್ಮ ರಾಜಕೀಯ ಬದುಕಲ್ಲಿ ಅಭಿವೃದ್ದಿ ಪರ ರಾಜಕಾರಣ ಮಾಡುತ್ತಾ ನಾಡಿನ ಒಳಿತಿಗಾಗಿ ಬದುಕನ್ನು ಮುಡುಪಿಟ್ಟ ಖರ್ಗೆ ಅವರ ಕುಟುಂಬವನ್ನು, ತಮ್ಮ ಸ್ವಾರ್ಥ ರಾಜಕೀಯಕ್ಕೋಸ್ಕರ, ಅಧಿಕಾರ ಲಾಲಸೆಗಾಗಿ ಈ ರೀತಿಯ ದೋಷಾರೋಪ ಹೇಳಿಕೆಗಳನ್ನು ನೀಡುವುದು ಖಂಡನೀಯ.

ಅವರಿಂದ ಉಪಕಾರ ಪಡೆದ ಅನೇಕರು ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಅದು ಛಲವಾದಿ ನಾರಾಯಣಸ್ವಾಮಿ ಅವರಿಗೂ ಗೊತ್ತಿರುವಂತಹ ಸಂಗತಿ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮ ಶಾಲಿನ ಬಣ್ಣ ಬದಲಾಯಿಸಿಕೊಂಡು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ನಾರಾಯಣ ಸ್ವಾಮಿಗಳು ರಾಜಕೀಯವಾಗಿ ಈಗ ಸ್ಥಾನಮಾನ ಗಳಿಸಿಕೊಳ್ಳಲು ಖರ್ಗೇ ಅವರ ಆಶೀರ್ವಾದವೇ ಮುಖ್ಯ ಕಾರಣ ಎನ್ನುವುದನ್ನು ಮರೆಯಬಾರದು. ಹತ್ತಿದ ಏಣಿಯನ್ನು ಒದೆಯುವ ಮನೋಧರ್ಮದ ಛಲವಾದಿ ನಾರಾಯಣಸ್ವಾಮಿ ಅವರು ಇಂತಹ ಹೇಳಿಕೆಗಳನ್ನು ನೀಡುವುದು ಮೊದಲು ನಿಲ್ಲಿಸಬೇಕು. ಇಲ್ಲವಾದರೆ ಜನರ ಮುಂದೆ ತಾವೇ ಬೆತ್ತಲಾಗುವ ಕಾಲ ದೂರವಿಲ್ಲ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande