

ಸಿರವಾರ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಿರವಾರ ತಾಲೂಕಿನ ಕ್ರೀಡಾಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸಿರವಾರ ತಾಲೂಕ ಕ್ರೀಡಾಂಗಣ ಕಾಮಗಾರಿ, ಒಂದೇ ಸೂರಿನಡಿ ಸೌಲಭ್ಯ ಒದಗಿಸುವ ಪ್ರಜಾಸೌಧ ಹಾಗೂ ಕ್ರೀಡಾಂಗಣ ಸ್ಥಳಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಅವರು ಕಾಮಗಾರಿಗಳನ್ನು ಪರಿಶೀಲಿಸಿದರು.
ಸಿರವಾರ ಪಟ್ಟಣದಲ್ಲಿ ಪ್ರಜಾ ಸೌಧ, ಅಗ್ನಿಶಾಮಕ ಠಾಣೆ ಹಾಗೂ ಕ್ರೀಡಾಂಗಣ ಕಾಮಗಾರಿಗಳನ್ನು ಸಚಿವ ಎನ್ಎಸ್ ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಅವರು ವೀಕ್ಷಣೆ ಮಾಡಿದರು.
ತಾಲೂಕ ಕ್ರೀಡಾಂಗಣ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಬೇಗ-ಬೇಗ ಮುಗಿಸಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕಾಗಿದೆ. ಅಲ್ಲದೆ ಒಂದೇ ಸೂರಿನಡಿಯಲ್ಲಿ ಎಲ್ಲಾ ಸೌಲಭ್ಯ ಒದಗಿಸುವ ಪ್ರಜಾ ಸೌಧ ಕಟ್ಟಡ ಕಾಮಗಾರಿಯನ್ನು ಸಹ ತ್ವರಿತಗತಿಯಲ್ಲಿ ಪ್ರಾರಂಭಿಸಿ ಒಂದೇ ಸೂರಿನಡಿ ಸೌಲಭ್ಯ ಕಲ್ಪಿಸಲು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ. ಹಾಗೂ ತಾಲೂಕ ಅಗ್ನಿ ಶಾಮಕ ಠಾಣೆ ಕಾಮಗಾರಿ ನಿರ್ವಹಣೆ ಸಂದರ್ಭದಲ್ಲಿ ಅಧಿಕಾರಿಗಳು ಮುಂದೆ ನಿಂತು ಮಾಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಅಶೋಕ ಪವಾರ್, ಮುಖಂಡರಾದ ಶರಣಯ್ಯ ನಾಯಕ, ಬ್ರಿಜ್ಜೆಶ ಪಾಟೀಲ್, ರುದ್ರಪ್ಪ ಅಂಗಡಿ, ಮಹಿಳಾ ಕಾಂಗ್ರೆಸ್ ಅದ್ಯಕ್ಷರಾದ ನಿರ್ಮಲಾ ಬೆಣ್ಣಿ, ಶಿವಕುಮಾರ ಚುಕ್ಕಿ, ದಾನಗೌಡ, ಅರಕೇರಾ ಶಿವಕುಮಾರ್, ಹಸನ್ ಅಲೀ, ಹೆಚ್ ಕೆ ಅಮರೇಶ, ನಾಗಪ್ಪ, ದುರುಗಣ್ಣ ನಾಯಕ, ನಾಗರಾಜ, ಬಸವರಾಜ ಕಲ್ಲೂರು, ವಾಸು ಬಾಬು, ಸುಬ್ಬರಾವ್, ರಡ್ಡೆಪ್ಪ ತಾಂಡ, ಅಮರೇಶ ತಾಯಣ್ಣ ನಾಯ್ಕ ಸೇರಿದಂತೆ ಅನೇಕರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್