
ಗದಗ, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನರೇಗಲ್ಲ ಪಟ್ಟಣದ ಸುರೇಶ ಬಸನಗೌಡ ಮದ್ನೂರ (ವಯಸ್ಸು 32) ಎಂಬ ವ್ಯಕ್ತಿ ಎಂಟು ವರ್ಷಗಳ ಹಿಂದೆ ಕಾಣೆಯಾಗಿದ್ದು, ಇದೀಗ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸುರೇಶ ಅವರು 2017ರ ಫೆಬ್ರವರಿ 18ರಂದು ಮುಂಜಾನೆ 8ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಮನೆಯಿಂದ ಯಾರಿಗೂ ತಿಳಿಸದೇ ತೆರಳಿದ್ದು, ಆ ನಂತರದಿಂದ ಈವರೆಗೆ ಪತ್ತೆಯಾಗಿಲ್ಲ. ಕುಟುಂಬದವರು ಎಲ್ಲೆಲ್ಲೋ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿಲ್ಲ ಎಂದು ವರದಿಗಾರ ತಮ್ಮನ ಕಾಣೆಯಾದ ಬಗ್ಗೆ ತಡವಾಗಿ ನರೇಗಲ್ಲ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಸುರೇಶರ ಎತ್ತರ ಸುಮಾರು 5 ಅಡಿ 2 ಇಂಚು, ಮೈಕಟ್ಟು ಸಾಧಾರಣ, ಮೈಬಣ್ಣ ಸಾದಗೆಂಪು, ದುಂಡುಮುಖ, ಕಪ್ಪು ಕೂದಲು ಹಾಗೂ ಕಿರಿದಾದ ಮೂಗು ಹೊಂದಿದ್ದಾರೆ. ಕಾಣೆಯಾಗುವ ವೇಳೆಗೆ ನೀಲಿ ಬಣ್ಣದ ಆಫ್ತೋಳಿನ ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿದ್ದರು.
ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ನರೇಗಲ್ಲ ಪೊಲೀಸ ಠಾಣೆ ಅಥವಾ ಗದಗ ಜಿಲ್ಲಾ ಪೊಲೀಸ ಕಚೇರಿಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.
ಸಂಪರ್ಕ:
ಗದಗ ಕಂಟ್ರೋಲ್ ರೂಮ್ – 9480804400
ಡಿಎಸ್ಪಿ ನರಗುಂದ ಉಪವಿಭಾಗ – 9480804408
ಸಿಪಿಐ ರೋಣ – 9480804434
ಪಿಎಐ ನರೇಗಲ್ಲ – 9480804454
ಹಿಂದೂಸ್ತಾನ್ ಸಮಾಚಾರ್ / lalita MP