






ಮಂತ್ರಾಲಯ, 03 ಜುಲೈ (ಹಿ.ಸ.)
ಆ್ಯಂಕರ್: ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತರೆಡ್ಡಿ ಅವರು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀಗಳ ದಿವ್ಯ ಆಶೀರ್ವಾದವನ್ನು ಪಡೆದಿದ್ದಾರೆ.
ಶಾಸಕ ನಾರಾ ಭರತರೆಡ್ಡಿ ಅವರು, ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ಮತ್ತು ಕೃಷಿಯ ಸಂರಕ್ಷಣೆಗೆ ಆಶೀರ್ವಾದ ಕೇಳಿದ್ದು, ಉತ್ತಮ ಮಳೆಗಾಗಿ ಪ್ರಾರ್ಥಿಸಿರುವೆ ಎಂದರು.
ಬಳ್ಳಾರಿ ಎಪಿಎಂಸಿ ಅಧ್ಯಕ್ಷ ಕಟ್ಟೇಮನಿ ನಾಗೇಂದ್ರ, ಮುಖಂಡರಾದ ಅಸುಂಡಿ ವಂಡ್ರಿ, ಪರಶುರಾಂ, ಹೊನ್ನಪ್ಪ, ಹಗರಿ ಗೋವಿಂದ್, ಗುಂತಕಲ್ ಸುರೇಶ್, ನಾಯ್ಡು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್