ಗೌತಮ ಬುದ್ದ ಏಷಿಯಾದ ಬೆಳಕು : ಕೆ ರಾಘವೇಂದ್ರ ಹಿಟ್ನಾಳ
ಕೊಪ್ಪಳ, 01 ಮೇ (ಹಿ.ಸ.) : ಆ್ಯಂಕರ್ : ಭಗವಾನ್ ಗೌತಮ ಬುದ್ದ ಅವರು ಇಡೀ ಏಷಿಯಾದ ಬೆಳಕು ಎಂದು ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ಗೌತಮ ಬುದ್ದ ವ್ಯಕ್ತಿತ್ವವನ್ನು ಬಣ್ಣಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಮೇ 01ರಂದು ನ
Gautama Buddha Light of Asia: K Raghavendra Hitna


Gautama Buddha Light of Asia: K Raghavendra Hitna


ಕೊಪ್ಪಳ, 01 ಮೇ (ಹಿ.ಸ.) :

ಆ್ಯಂಕರ್ : ಭಗವಾನ್ ಗೌತಮ ಬುದ್ದ ಅವರು ಇಡೀ ಏಷಿಯಾದ ಬೆಳಕು ಎಂದು ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ಗೌತಮ ಬುದ್ದ ವ್ಯಕ್ತಿತ್ವವನ್ನು ಬಣ್ಣಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಮೇ 01ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ಭಗವಾನ್ ಬುದ್ಧ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಮ್ಮ ಮನೆಯಲ್ಲಿದ್ದ ಸಿರಿ ಸಂಪತ್ತನ್ನು ತ್ಯಜಿಸಿ ಸರಳ ಬದುಕಿಗೆ ಬಂದ ಬುದ್ದ ಅವರು ಈ ಜಗತ್ತು ಕಂಡ ಮಹಾಮಹೀಮರಾಗಿದ್ದಾರೆ. ಇಂತಹ ಮಹಾತ್ಮನ ಜಯಂತಿಯು ರಾಜ್ಯ ಸರ್ಕಾರದಿಂದ ನಡೆಯುತ್ತಿರುವುದು ವಿಶೇಷ ಎಂದರು. 75 ವರ್ಷಗಳಾದರು ಸಹ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವ ಕೆಲಸ ಮಾಡಬೇಕಿದೆ. ಅಂದಾಗ ಸಮಾನತೆ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ಬುದ್ದ ಪೂರ್ಣಿಮೆಯು ಸಂಭ್ರಮದ ದಿನವಾಗಿದೆ. ಬುದ್ದ, ಬಸವ, ಅಂಬೇಡ್ಕರ ಅವರು ಜಗತ್ತಿಗೆ ಬೆಳಕು ನೀಡಿದ ಮಹಾನ್ ನಾಯಕರು. ಯುದ್ದ ಬೇಡ ಬುದ್ದ ಬೇಕು ಎಂದು ಈಗ ಇಡೀ ಜಗತ್ತೇ ಹೇಳುತ್ತಿದೆ. ಸಾಮರಸ್ಯದ ಬದುಕು ಕಟ್ಟಿಕೊಳ್ಳಲಾಗದಂತಹ ಪರಿಸ್ಥಿತಿ ಇಂದು ಜಗತ್ತಿನಲ್ಲಿ ಮುಂದುವರೆದಿದೆ. ಅಹಿಂಸೆ ಬೇಡ, ನಾವು ಬದುಕಬೇಕು ಮತ್ತು ಇತರರಿಗೂ ಬದುಕಲು ಬಿಡಬೇಕು ಎಂಬ ಮಹತ್ವದ ಸಂದೇಶವನ್ನು ಗೌತಮ ಬುದ್ದ ನೀಡಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಉಪ ಅಧೀಕ್ಷಕರಾದ ಗಿರೀಶ ಕಾಂಬ್ಳೆ ಅವರು ವಿಶೇಷ ಉಪನ್ಯಾಸ ನೀಡಿ, ಬುದ್ದ ಅವರು ಕೇವಲ ಭಾರತದ ಬೆಳಕಲ್ಲ; ಅವರು ಇಡೀ ಜಗತ್ತಿನ ಬೆಳಕು. ಬುದ್ದ ಅಂದರೆ ಅದು ಮಹಾಸಾಗರ ಇದ್ದಂತೆ. ನಮ್ಮ ಮುಂದಿನ ಏಳ್ಗೇಗೆ, ನಮ್ಮ ಮುಂದಿನ ಬಾಳ್ವೆಗೆ ಬುದ್ದ ಬೇಕು. ಬುದ್ದನನ್ನು ಅರ್ಥ ಮಾಡಿಕೊಂಡವರು ಈ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕುತ್ತಾರೆ. ಬುದ್ದ ಒಂದು ಜಾತಿ, ಭಾμÉ, ಪ್ರದೇಶ, ದೇಶಕ್ಕೆ ಸೀಮೀತರಾಗಿಲ್ಲ. ಅವರ ವಿಚಾರ ವಿಶ್ವವ್ಯಾಪಿ ಎಂದರು. ಬುದ್ದನ ಆಶಯದಂತೆ ಡಾ.ಅಂಬೇಡ್ಕರ್ ಅವರು ಸಂವಿಧಾನ ಬರೆದರು ಎಂದು ತಿಳಿಸಿದರು. ರೋಗಿಯನ್ನು, ಸತ್ತವನನ್ನು ನೋಡಿದ ಗೌತಮ ಬುದ್ದ ಆಸ್ತಿ ಕೇಳಲಿಲ್ಲ; ಸಂಪತ್ತು ಕೇಳಲಿಲ್ಲ. ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ ಎಂದು ತಿಳಿಸಿದವರು ಬುದ್ದ. ಬುದ್ದ ಎಂದರೆ ಶಾಂತಿಯ ದ್ಯೋತಕ. ಆದರೆ ಬುದ್ದನ ವಿಚಾರಗಳು ಬೆಳೆಯಲು ಕೆಲವರು ಬಿಡುತ್ತಿಲ್ಲ ಎಂದರು.

ಸಮಾರಂಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ, ಪ್ರಸನ್ನ ವೀರಣ್ಣ ಗಡಾದ್, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಮುಖಂಡರಾದ ಕೃಷ್ಣ ಇಟ್ಟಂಗಿ, ಮುತ್ತುರಾಜ್ ಕುಷ್ಟಗಿ, ಸಿದ್ರಾಮ ಹೊಸಮನಿ, ನಾಗರಾಜ ಬೆಲ್ಲದ, ರಘು ಬೆಲ್ಲದ, ಜಗದೀಶ ಚಲವಾದಿ, ಹನುಮಂತಪ್ಪ ಬಂಗಾಳಿಗಿಡದ, ಮಹಾವೀರ ಅಳ್ಳಳ್ಳಿ, ಗವಿಸಿದ್ದಪ್ಪ ಬೆಲ್ಲದ ಹಾಗೂ ಇತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಸ್ವಾಗತಿಸಿದರು. ಬಿ ಎನ್ ಹೊರಪೇಟೆ ನಿರೂಪಿಸಿದರು. ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande