ಬುಡಕಟ್ಟು ಸಂಸ್ಕೃತಿ ಸಂರಕ್ಷಣೆ ಮಹತ್ವದ್ದು:ರಾಷ್ಟ್ರಪತಿ ದ್ರೌಪದಿ ಮುರ್ಮು
ಡಾರ್ಜಿಲಿಂಗ್‌, 07 ಮಾರ್ಚ್ (ಹಿ.ಸ.): ಆ್ಯಂಕರ್: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಡೆದ 9ನೇ ಅಂತರರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ಭಾಗವಹಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಲ್ ಸಮುದಾಯದ ಇತಿಹಾಸ ಮತ್ತು ಹೋರಾಟವನ್ನು ಸ್ಮರಿಸಿದರು. ಸುಮಾರು 240 ವರ್ಷಗಳ ಹಿಂದೆ ಶೋಷಣೆ ಮತ್ತು
President


ಡಾರ್ಜಿಲಿಂಗ್‌, 07 ಮಾರ್ಚ್ (ಹಿ.ಸ.):

ಆ್ಯಂಕರ್:

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಡೆದ 9ನೇ ಅಂತರರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ಭಾಗವಹಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಲ್ ಸಮುದಾಯದ ಇತಿಹಾಸ ಮತ್ತು ಹೋರಾಟವನ್ನು ಸ್ಮರಿಸಿದರು.

ಸುಮಾರು 240 ವರ್ಷಗಳ ಹಿಂದೆ ಶೋಷಣೆ ಮತ್ತು ಅನ್ಯಾಯದ ವಿರುದ್ಧ ತಿಲ್ಕಾ ಮಾಝಿ ದಂಗೆಯ ಬಾವುಟ ಹಾರಿಸಿದ್ದು ಸಂತಾಲ್ ಸಮುದಾಯಕ್ಕೆ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು. ಅವರ ಹೋರಾಟದ ಸುಮಾರು 60 ವರ್ಷಗಳ ಬಳಿಕ ಧೈರ್ಯಶಾಲಿ ಸಹೋದರರಾದ ಸಿಧು ಮತ್ತು ಕನ್ಹು , ಜೊತೆಗೆ ಚಂದ್ ಮತ್ತು ಭೈರವ್ ಅವರು ಧೈರ್ಯಶಾಲಿ ಸಹೋದರಿಯರಾದ ಫುಲೋ ಮತ್ತು ಜಾನೋ ಅವರೊಂದಿಗೆ 1855ರಲ್ಲಿ ಸಂತಾಲ್ ಹುಲ್ ಅನ್ನು ಮುನ್ನಡೆಸಿದರು ಎಂದು ಹೇಳಿದರು.

ಬುಡಕಟ್ಟು ಸಮುದಾಯಗಳು ಶತಮಾನಗಳಿಂದ ತಮ್ಮ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬಂದಿವೆ ಎಂದು ರಾಷ್ಟ್ರಪತಿಗಳು ಒತ್ತಿ ಹೇಳಿದರು. ಜಾನಪದ ಪರಂಪರೆ ಮತ್ತು ಪ್ರಕೃತಿಯನ್ನು ಕಾಪಾಡುತ್ತಾ ಆಧುನಿಕ ಅಭಿವೃದ್ಧಿಯೊಂದಿಗೆ ಮುನ್ನಡೆಯುವುದು ಅಗತ್ಯವೆಂದು ಅವರು ತಿಳಿಸಿದರು.

ಸಂತಾಲ್ ಸಮುದಾಯದವರು ತಮ್ಮ ಸ್ವಂತ ಭಾಷೆಯೊಂದಿಗೆ ನಂಟು ಕಾಪಾಡಿಕೊಳ್ಳುವುದರ ಜೊತೆಗೆ ಇತರ ಭಾಷೆಗಳು ಮತ್ತು ಲಿಪಿಗಳನ್ನೂ ಕಲಿಯಬೇಕು ಎಂದು ಅವರು ಕರೆ ನೀಡಿದರು. ಇದರಿಂದ ಜ್ಞಾನ ವಿಸ್ತರಣೆ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande