



ಬಳ್ಳಾರಿ, 19 ಜನವರಿ (ಹಿ.ಸ.) :
ಆ್ಯಂಕರ್ : ದಾಸರ ನಾಗೇನಹಳ್ಳಿಯ ಶ್ರೀಗುರು ಮರುಳ ಸಿದ್ಧಾಶ್ರಮದ ಶ್ರೀ ನಂಜುಂಡೇಶ್ವರ ಜನಸೇವೆ ಕಲ್ಯಾಣ ಟ್ರಸ್ಟ್ ಹಾಗೂ ಭಾರತೀಯ ಪಾಲಿ ಕ್ಲಿನಿಕ್ ಅವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆದಿದ್ದು, 250ಕ್ಕೂ ಹೆಚ್ಚಿನ ಜನರು ಆರೋಗ್ಯ ತಪಾಸಣೆಗೆ ಒಳಪಟ್ಟಿದ್ದಾರೆ.
ಡಿ. ನಾಗೇನಹಳ್ಳಿ, ಮೋಕಾ ಸುತ್ತಲಿನ ಗ್ರಾಮಗಳವರು ರಕ್ತದೊತ್ತಡ, ಮಧುಮೇಹ, ಹೃದಯ ಹಾಗೂ ಸಾಮಾನ್ಯ ಆರೋಗ್ಯದ ತಪಾಸಣೆಗೆ ಒಳಪಟ್ಟರು.
ಭಾರತೀಯ ಪಾಲಿ ಕ್ಲಿನಿಕ್ನ ಡಾ. ಸುರೇಶ್ ಗಡೇಕಲ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಮತ್ತು ವೈದ್ಯರ ತಂಡವು ಆರೋಗ್ಯ ತಪಾಸಣೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್