ಸಹಕಾರ ಕ್ಷೇತ್ರಗಳ ಪ್ರಗತಿ ಸರಕಾರದೊಂದಿಗೆ ಪೈಪೋಟಿಯನ್ನು ನೀಡುವ ಮಟ್ಟಕ್ಕೆ ಬೆಳೆದಿದೆ
ಸಹಕಾರ ಕ್ಷೇತ್ರಗಳ ಪ್ರಗತಿ ಸರಕಾರದೊಂದಿಗೆ ಪೈಪೋಟಿಯನ್ನು ನೀಡುವ ಮಟ್ಟಕ್ಕೆ ಬೆಳೆದಿದೆ
ಚಿತ್ರ : ಕೋಲಾರ ತಾಲೂಕಿನ ಅವನಿಯ ರೆಸಾರ್ಟ್ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಮತ್ತು ಕಚೇರಿಯ ಉಪವ್ಯವಸ್ಥಾಪಕರು ಸಹಾಯಕ ವ್ಯವಸ್ತಾಪಕರು, ವಿಸ್ತರಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟ ವಿಶೇಷ ತರಬೇತಿ ಕಾರ್ಯಾಗಾರವನ್ನು ಶಾಸಕ ಕೆ.ವೈ ನಂಜೇಗೌಡ ಉದ್ಘಾಟಿಸಿದರು.


ಕೋಲಾರ, 0೨ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೋಲಾರ ಸಹಕಾರ ಕ್ಷೇತ್ರಗಳ ಪ್ರಗತಿಯೂ ಸರಕಾರದೊಂದಿಗೆ ಪೈಪೋಟಿಯನ್ನು ನೀಡುವ ಮಟ್ಟಕ್ಕೆ ಬೆಳೆದು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ ಎಂದು ಶಾಸಕ ಕೆ.ವೈ ನಂಜೇಗೌಡ ಹೇಳಿದರು.

ಕೋಲಾರ ತಾಲೂಕಿನ ಅವನಿಯ ರೆಸಾರ್ಟ್ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಮತ್ತು ಕಚೇರಿಯ ಉಪವ್ಯವಸ್ಥಾಪಕರು ಸಹಾಯಕ ವ್ಯವಸ್ತಾಪಕರು, ವಿಸ್ತರಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಸ್ಥೆಗಳ ಮೂಲಕ ಹಾಲು ಡೇರಿಗಳಿಗೆ ಸಾಮಾನ್ಯ ಸಾಫ್ಟ್ವೇರ್ ಅಳವಡಿಕೆಗೆ ಸರ್ಕಾರ ತೆಗೆದುಕೊಂಡ ತೀರ್ಮಾನವಾಗಿದೆ ದೇಶದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸಾಧನೆ ಮನೆ ಮಾತಾಗಿದ್ದ ಡಿಸಿಸಿ ಬ್ಯಾಂಕ್ಗೆ ಆಡಳಿತ ಮಂಡಳಿ ಇಲ್ಲದಿರುವುದು, ಸುಮಾರು ಮಹಿಳಾ ಸಂಘಗಳಿಗೆ ಸಾಕಷ್ಟು ತೊಂದರೆ ಎದುರಾಗುತ್ತಿದೆ ಎಂದರು.

ಜಿಲ್ಲೆಯ ಕೋಮುಲ್ ಮತ್ತು ಡಿಸಿಸಿ ಬ್ಯಾಂಕ್ ಸಹಕಾರ ಕ್ಷೇತ್ರಗಳು ಉತ್ತಮ ಸಾಧನೆಯ ಮೂಲಕ ಎತ್ತರದಲ್ಲಿದೆ, ಕೋಮುಲ್ ಒಕ್ಕೂಟ ನಾನಾ ಕಾರ್ಯಕ್ರಮಗಳನ್ನು ಹಾಲು ಉತ್ಪಾದಕರಿಗೆ ನೀಡುವ ಮೂಲಕ ಇತಿಹಾಸ ಪುಟಗಳಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ ರಾಜ್ಯದ ಹಾಲು ಒಕ್ಕೂಟಗಳಲ್ಲಿ ಮಂಗಳೂರು ಒಕ್ಕೂಟ ಬಿಟ್ಟರೆ, ಹಾಸನ ಬೆಂಗಳೂರು ಜಿಲ್ಲೆಗಳು ಸಹ ಹಾಲಿನ ದರ ಹೆಚ್ಚಳ ಮಾಡಿಲ್ಲ, ಕೋಲಾರ ಹಾಲು ಒಕ್ಕೂಟ ಹೆಚ್ಚಿನ ದರವನ್ನು ನೀಡಲಾಗುತ್ತಿದೆ, ಹಾಲು ಉತ್ಪಾದಕರ ಸಂಖ್ಯೆಯು ಹೆಚ್ಚಾಗಿದೆ ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತಗೊಳಿಸಿ, ಸಹಕಾರ ಕ್ಷೇತ್ರದಲ್ಲಿನ ಅವಕಾಶಗಳಿಗೆ ರಾಜಕಾರಣ ಬಳಸಿದರೆ, ಸಂಸ್ಥೆಯನ್ನು ಕಟ್ಟಲು ಸಾಧ್ಯವಿಲ್ಲ ಎಂದರು.

ಜಿಲ್ಲೆಯ ಕೆಎಂಎಫ್, ಡಿಸಿಸಿ ಬ್ಯಾಂಕ್ ೨ ಸಂಸ್ಥೆಗಳು ರೈತರ ಹಾಗೂ ಮಹಿಳೆಯ ರೈತ ಹಿತಕ್ಕಾಗಿ ಉಳಿಸಿಕೊಳ್ಳಬೇಕು, ಸಂಸ್ಥೆಯ ಸಹಕಾರಿಗಳಾಗಿದ್ದು, ಪಕ್ಷಾತೀತವಾಗಿ ಎರಡು ಸಹಕಾರ ಕ್ಷೇತ್ರಗಳನ್ನು ಉಳಿಸುವ ಕೆಲಸ ಮಾಡಲು ನಿರ್ದೇಶಕರ ಸಹಕಾರ ಅಗತ್ಯವಾಗಿರಬೇಕೆಂದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಕೋಲಾರ ಒಕ್ಕೂಟ ವಿಭಜನೆ ನಂತರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚಿಮುಲ್ಗೆ ಚುನಾವಣೆ ನಡೆದಿಲ್ಲ, ಇನ್ನು ವರ್ಷ ಆದರೂ ಸಹ ಮಾಡಲು ಸಾಧ್ಯವಿಲ್ಲ, ಕೋಮುಲ್ ಡೈರಿ ಚುನಾವಣೆಯನ್ನು ಒಗ್ಗಟ್ಟಿನಿಂದ ಕೋಲಾರ ಆಡಳಿತ ಮಂಡಳಿ ಬರಬೇಕು ಆಡಳಿತ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಬಾರದೆಂದು ಸಹಕಾರಿಗಳು ಒಗ್ಗಟ್ಟಿನಿಂದ ಮಾಡಿದ್ದು ಕೋಮುಲ್ ಆಡಳಿತ ಮಂಡಳಿ ಇಂದು ನಡೆಯುತ್ತಿದೆ ಎಂದರು.

ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಹಾಲು ಒಕ್ಕೂಟದಿಂದ ಹಾಲು ಡೈರಿಗಳಿಗೆ ಗುಣಮಟ್ಟದ ಮೇಲೆ ಹಾಲಿನ ದರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಕೆಲವೊಂದು ಹಾಲು ಡೈರಿ ಗುಣಮಟ್ಟದ ಹಾಲಿಗೆ ತಕ್ಕಂತೆ ದರ ನೀಡಲಾಗುತ್ತಿದೆ, ಹೀಗಾಗಿ ಹಾಲು ಉತ್ಪಾದಕರು ಸಹ ಗುಣಮಟ್ಟದ ಹಾಲನ್ನು ಡೈರಿಗಳಿಗೆ ನೀಡುವ ಮೂಲಕ ಹೆಚ್ಚಿನ ದರವನ್ನು ಪಡೆದುಕೊಳ್ಳುವಂತಾಗಬೇಕು ಎಂದರು.

ಗುಣಮಟ್ಟ ಇಲ್ಲದ ಹಾಲಿನಿಂದ ಒಕ್ಕೂಟ ಮತ್ತು ರೈತರಿಗೆ ಇಬ್ಬರಿಗೂ ಸಹ ತೊಂದರೆ ಯಾಗುತ್ತಿದೆ ಎಂದು ಹೇಳಿದಲ್ಲದೆ, ಕೆಎಂಎಫ್ ಹಾಲು ಒಕ್ಕೂಟ, ಹಾಗೂ ಯೂನಿ ಯನ್, ಹಾಲು ಡೈರಿಗಳು ಒಬ್ಬರನ್ನೊಬ್ಬರು ಅವಲಂಬಿಸಿ ದ್ದಾರೆ, ಅಧಿಕಾರಿಗಳಾಗುವ ವಿಸ್ತರಣಾಧಿಕಾರಿಗಳು ಮುತುವರ್ಜಿ ವಹಿಸಿ ಸಾಫ್ಟ್ವೇರ್ ಅನ್ನು ಬಳಸಿ ಕೊಳ್ಳಲು ಅಧಿಕಾರಿಗಳು ಮುಂದಾಗಬೇಕೆಂದರು.

ಸಹಕಾರ ರಂಗದ ಕ್ಷೇತ್ರದಲ್ಲಿ ಸಾಫ್ಟ್ವೇರ್ ಅನಿವಾರ್ಯ ಬಹಳ ಇದೆ, ಸಾಫ್ಟ್ವೇರ್ ನ ತರಬೇತಿ ಯನ್ನು ಅಧಿಕಾರಿಗಳು ಪಡೆಯುವ ಮೂಲಕ ಮನಪರಿವರ್ತನೆ ಮಾಡಿಕೊಳ್ಳಬೇಕಿದೆ ಎಂದರು.

ಸಭೆಯಲ್ಲಿ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ಹೆಚ್.ವಿ ನಾಗರಾಜ್, ಎ.ಸಿ ನಾಗರಾಜ್, ಕಾಂತಮ್ಮ, ಬಿ.ವಿ ಸಾಮೇಗೌಡ, ಬಿ. ರಮೇಶ್, ಕೆ.ಕೆ.ಮಂಜು, ಶ್ರೀನಿವಾಸ್, ಯೂನಿಸ್ ಷರಿಫ್, ಉರಿಗಿಲಿ ರುದ್ರುಸ್ವಾಮಿ, ಅ.ಮು ಲಕ್ಷ್ಮೀ ನಾರಾಯಣ, ಮೂರಾಂಡಹಳ್ಳಿ ಗೋಪಾಲಪ್ಪ, ಪೆಮ್ಮಶೆಟ್ಟಹಳ್ಳಿ ಸುರೇಶ್, ಪಾಕರಹಳ್ಳಿ ವೆಂಕಟೇಶ್, ಗೋವರ್ಧನರೆಡ್ಡಿ, ಶಂಕರನಾರಾಯಣಗೌಡ, ವಿ.ರಘುಪತಿರೆಡ್ಡಿ, ಎನ್.ನಾಗರಾಜ್, ಕೆ.ಎಂ. ಮಂಜುನಾಥ್, ಅರುಣಮ್ಮ, ಪಾಪಣ್ಣ ವಿ, ಪಿ.ಎನ್.ಕೃಷ್ಣಾರೆಡ್ಡಿ, ಕೆ.ಎಂ.ವೆಂಕಟೇಶಪ್ಪ, ಷೇಕ್ ಅಹಮದ್, ಕೆ.ಎಸ್.ನವೀನ್, ಡಾ.ಚೇತನ್, ಭಾರತಿ, ಎಸ್.ಎನ್.ವೇಣುಗೋಪಾಲ್, ಎನ್.ಲಕ್ಷ್ಮಿದೇವಮ್ಮ ಭಾಗವಹಿಸಿದ್ದರು.

ಚಿತ್ರ : ಕೋಲಾರ ತಾಲೂಕಿನ ಅವನಿಯ ರೆಸಾರ್ಟ್ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಮತ್ತು ಕಚೇರಿಯ ಉಪವ್ಯವಸ್ಥಾಪಕರು ಸಹಾಯಕ ವ್ಯವಸ್ತಾಪಕರು, ವಿಸ್ತರಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟ ವಿಶೇಷ ತರಬೇತಿ ಕಾರ್ಯಾಗಾರವನ್ನು ಶಾಸಕ ಕೆ.ವೈ ನಂಜೇಗೌಡ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande