ಮಕ್ಕಳಲ್ಲಿ ಬರವಣಿಗೆ ಕೌಶಲ್ಯ, ಏಕಾಗ್ರತೆ ಹೆಚ್ಚಿಸಿ : ಕುರೇರ್
ವಿಜಯಪುರ, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೆಲವು ವಿದ್ಯಾರ್ಥಿಗಳು ಮೌಖಿಕವಾಗಿ ಉತ್ತರ ನೀಡುತ್ತಾರೆ ಹೊರತು ಬರೆಯುವಲ್ಲಿ ಕಷ್ಟ ಪಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ದಿನನಿತ್ಯ ಶಾಲೆಗಳಲ್ಲಿ ಬರೆವಣಿಗೆ ಕೌಶಲ್ಯ ಮತ್ತು ಏಕಾಗ್ರತೆ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಜಿಲ್ಲಾ ಪಂ
ಬಾಗಲಕೋಟೆ


ವಿಜಯಪುರ, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೆಲವು ವಿದ್ಯಾರ್ಥಿಗಳು ಮೌಖಿಕವಾಗಿ ಉತ್ತರ ನೀಡುತ್ತಾರೆ ಹೊರತು ಬರೆಯುವಲ್ಲಿ ಕಷ್ಟ ಪಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ದಿನನಿತ್ಯ ಶಾಲೆಗಳಲ್ಲಿ ಬರೆವಣಿಗೆ ಕೌಶಲ್ಯ ಮತ್ತು ಏಕಾಗ್ರತೆ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ್ ಹೇಳಿದರು.

ಬಾಗಲಕೋಟೆ ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಗುರುವಾರ ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಇವರ ವತಿಯಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲ್ಯಾಬ್, ಸ್ಮಾರ್ಟ್ ಬೋರ್ಡ್ ಸೇರಿದಂತೆ ಶಾಲೆಯಲ್ಲಿನ ಸೌಲಭ್ಯಗಳನ್ನು ಸಂಪೂರ್ಣವಾಗಿ ಮಗುವಿನ ಪ್ರಗತಿಗೆ ಬಳಸಿಕೊಳ್ಳಿ, ತರಗತಿಯ ಪ್ರತಿ ಮಗುವಿನ ಕುರಿತು ಶಿಕ್ಷಕರಿಗೆ ಸಂಪೂರ್ಣ ಮಾಹಿತಿ ಇರತಕ್ಕದ್ದು, ಅಣಕು ಪರೀಕ್ಷೆ, ಮಾದರಿ ಪ್ರಶ್ನೋತ್ತರಗಳನ್ನು ಬರೆಯಿಸುವುದರ ಜೊತೆಗೆ ಓದಿಸುವ ರೂಡಿ ಸಹ ನೆನಪಿಡಲೂ ಸಹಾಯವಾಗುತ್ತದೆ ಎಂದರು.

ಅಧಿಕಾರಿಗಳು ತಮಗೆ ನೀಡಿದ ದತ್ತು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಗತಿ ಕುರಿತು ವರದಿ ಸಲ್ಲಿಸಬೇಕು. ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ವೈಯಕ್ತಿಕ ಪ್ರಗತಿ, ಶಾಲೆಯ ಸ್ಥಿತಿಗತಿ, ಶಿಕ್ಷಕರ ಕುರಿತು ಸಂಪೂರ್ಣ ವರದಿ ನೀಡಬೇಕು. ಅಧಿಕಾರಿಗಳ ಭೇಟಿಯಿಂದ ಶಾಲೆಗಳಲ್ಲಿ ಬದಲಾವಣೆ ಸಾಧ್ಯ. ಶಿಕ್ಷಕರು ಅನಾವಶ್ಯಕ ಸಭೆಗಳನ್ನು, ರಜೆಗಳನ್ನು ಬಿಟ್ಟು ಮಕ್ಕಳ ಮತ್ತು ಶಾಲೆಯ ಪ್ರಗತಿಯತ್ತ ಗಮನ ಹರಿಸಬೇಕು ಎಂದರು.

ಸೋಶಿಯಲ್ ಮೀಡಿಯಾ ನಿಷೇಧದಿಂದ ದೇಶವೊಂದರ ಆಡಳಿತವೇ ತಲೆಕೆಳಗಾದ ಉದಾಹರಣೆ ನೀಡುತ್ತ, ಮಕ್ಕಳಲ್ಲಿನ ಮೊಬೈಲ್ ಅಡಿಕ್ಷನ್ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ ಅವರು, ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸುವ ಮತ್ತು ಅದರ ಸರಿಯಾದ ಬಳಕೆಯ ಕುರಿತು ಜಾಗೃತಿ ಮೂಡಿಸುವಂತೆ ಮತ್ತು ಜಿಲ್ಲಾಧಿಕಾರಿಗಳ ಜೊತೆಗೆ ಈಗಾಗಲೇ ಶಾಲೆ, ಕಾಲೇಜುಗಳಲ್ಲಿ ಮೊಬೈಲ್ ಸಂಪೂರ್ಣ ನಿಷೇಧದ ಕುರಿತು ಚರ್ಚೆ ಆಗಿರುವುದನ್ನು ಮತ್ತು ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಮತ್ತು ದೇಶಪ್ರೇಮ ತುಂಬಲು ಹೇಳಿದರು.

ಮೊರಾರ್ಜಿ ಶಾಲೆಗಳು ಎಲ್ಲ ಸೌಕರ್ಯಗಳಿದ್ದರೂ ಉತ್ತಮ ಫಲಿತಾಂಶ ನೀಡುತ್ತಿಲ್ಲ. ಈ ಸಲ ಹೆಚ್ಚಿನ ಶ್ರಮವಹಿಸಿ ಉತ್ತಮ ಫಲಿತಾಂಶ ಸಾಧಿಸಬೇಕಾಗಿದ್ದು, ಉತ್ತಮ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಗೌರವಿಸಲಾಗುವುದು ಮತ್ತು ನಿರ್ಲಕ್ಷತನ ವಹಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಒಟ್ಟಾರೆಯಾಗಿ ಕಳೆದ ವರ್ಷದ ಫಲಿತಾಂಶಕ್ಕಿ0ತ ಉತ್ತಮ ಫಲಿತಾಂಶ ಸಾಧಿಸುವಲ್ಲಿ ಎಲ್ಲರೂ ಸೇರಿ ಕಾರ್ಯ ನಿರ್ವಹಿಸಬೇಕು ಎಂದರು .

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಸಿ.ಮನ್ನಿಕೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಕಾಂಬಳೆ, ಶಿಕ್ಷಣಾಧಿಕಾರಿ ಎಸ್.ಜಿ.ಮಿರ್ಜಿ, ಪಿಯು ಕಾಲೇಜುಗಳ ಪ್ರಾಂಶುಪಾಲರು, ಮೊರಾರ್ಜಿ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಣ ಇಲಾಖೆಯ ಬಿಇಒಗಳು ಮತ್ತು ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande