ದುರಗಮುರಗಿ ಸಮುದಾಯಕ್ಕೆ ಎಸ್‌.ಟಿ ಪ್ರಮಾಣ ಪತ್ರ : ಮನವಿ
ನಾನಾ
ಎಸ್ ಟಿ


ವಿಜಯಪುರ, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಎಸ್‌ಟಿ ಪ್ರಮಾಣ ಪತ್ರ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವಿಜಯಪುರ ಜಿಲ್ಲಾ ವಾಲ್ಮೀಕಿ ಸಂಘದವರು ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ದುರಗಮುರಗಿ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಬೇಕು. ಜಿಲ್ಲೆಯ ಏಳು ಜನರ ಎಸ್‌ಟಿ ಪ್ರಮಾಣ ಪತ್ರ ತಡೆಹಿಡಿದಿರುವ ಪ್ರಮಾಣ ಪತ್ರ ನೀಡಬೇಕು. ವಾಲ್ಮೀಕಿ ನಿಗಮದಿಂದ ಸೌಲಭ್ಯಗಳು ಸಿಗುತ್ತಿಲ್ಲ. ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಾಲ್ಮೀಕಿ, ಬೇಡರ್, ಎಸ್‌ಟಿ ಅವರಿಗೆ ನಾನಾ ಸೌಲಭ್ಯಗಳು ಮರಿಚೀಕೆ ಆಗಿದ್ದಾವೆ. ಅದಕ್ಕಾಗಿ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande