ಡೆಹ್ರಾಡೂನ್, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಿಂದ ಇಂದು ಬೆಂಗಳೂರಿಗೆ ಮೂರನೇ ನೇರ ವಿಮಾನ ಸೇವೆ ಆರಂಭಗೊಂಡಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಸಿರು ನಿಶಾನೆ ತೋರಲಿದ್ದಾರೆ. ಈ ವಿಮಾನವು ಪ್ರತಿದಿನ ಸಂಜೆ 4 ಗಂಟೆಗೆ ಡೂನ್ ತಲುಪಿ, 4:30ಕ್ಕೆ ಬೆಂಗಳೂರಿಗೆ ಮರಳಲಿದೆ.
ಇದೇ ವೇಳೆ, ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ ಕೇದಾರನಾಥ ಧಾಮಕ್ಕೆ ಹೆಲಿಕಾಪ್ಟರ್ ಸೇವೆಗಳನ್ನು ಪುನರ್ ಪ್ರಾರಂಭಿಸಿದೆ.
ಗುಪ್ತಕಾಶಿ, ಸಿರ್ಸಿ ಮತ್ತು ಫಾಟಾದಿಂದ ಆರು ಕಂಪನಿಗಳ ಏಳು ಹೆಲಿಕಾಪ್ಟರ್ಗಳು ಸೇವೆ ನೀಡಲಿದ್ದು, ಮಳೆಗಾಲದಲ್ಲಿ ಸ್ಥಗಿತಗೊಂಡಿದ್ದ ಈ ಸೇವೆ ಮತ್ತೆ ಆರಂಭವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa