ನವದೆಹಲಿ, 30 ಜೂನ್ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆಯಾದರೆ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಲಾಗುವುದು ಎಂಬ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಬಿಜೆಪಿ ವಕ್ತಾರ ಡಾ. ಸುಧಾಂಶು ತ್ರಿವೇದಿ, ತೇಜಸ್ವಿ ಅವರು ಸಂವಿಧಾನವನ್ನು ಗೌರವಿಸದ ಮಾತುಗಳನ್ನು ಹೇಳುತ್ತಿದ್ದಾರೆ. ವಕ್ಫ್ ಕಾಯ್ದೆ ಸಂಸತ್ ಅಂಗೀಕರಿಸಿದ್ದು, ಅದು ನ್ಯಾಯಾಂಗದಲ್ಲಿದೆ, ಎಂದು ತಿಳಿಸಿದ್ದಾರೆ.
ತೇಜಸ್ವಿಯ ವರ್ತನೆ ಸಂವಿಧಾನ ವಿರೋಧಿ, ಮತಬ್ಯಾಂಕ್ ರಾಜಕೀಯವನ್ನೇ ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದರು. ವಕ್ಫ್ ಪದದ ಪ್ರಾಮಾಣಿಕತೆಯ ಕುರಿತು ಪ್ರಶ್ನೆ ಎತ್ತಿದ ತ್ರಿವೇದಿ, ಇದನ್ನು ಜಾತ್ಯತೀತ ರಾಷ್ಟ್ರದಲ್ಲಿ ಧರ್ಮಾಧಿಷ್ಠಿತ ನಿಯಮಗಳ ಆಧಾರವಾಗಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa