ಗದಗ, 23 ಜೂನ್ (ಹಿ.ಸ.) :
ಆ್ಯಂಕರ್ : ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಲು ಹೋರಾಟ ಮಾಡುತ್ತಾ ಪ್ರಾಣ ತ್ಯಾಗವನ್ನೇ ಡಾ ಶ್ಯಾಮ್ ಪ್ರಸಾದ ಮುಖರ್ಜಿ ಅವರ ಸಂಕಲ್ಪವನ್ನು ಆರ್ಟಿಕಲ್ 370 ರದ್ದು ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಂದ ಸಾಕಾರವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ನಾಗರಾಜ ಕುಲಕರ್ಣಿ ಹೇಳಿದರು.
ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಡಾ ಶ್ಯಾಮ ಪ್ರಸಾದ ಮುಖರ್ಜಿ ಅವರ ಪುಣ್ಯತಿಥಿ ನಿಮಿತ್ಯ ಜರುಗಿದ ಬಲಿದಾನ ದಿವಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯದ ಬಳಿಕವು ರಾಷ್ಟ್ರದ ಆಡಳಿತದಲ್ಲಿ ಒಂದಾಗದೆ ಪ್ರತ್ಯೇಕ ಪ್ರಧಾನಿ, ಧ್ವಜ ಹಾಗು ಕಾನೂನು ಅನುಸರಿಸುವ ಮೂಲಕ ಕಾಶ್ಮೀರವು ದೇಶದ ಸಾರ್ವಭೌಮತ್ವಕ್ಕೆ ದಕ್ಕೆ ತರುತ್ತದೆ ಎಂದು ಮನಗಂಡ ಮುಖರ್ಜಿ ಅವರು ಒಂದು ದೇಶದಲ್ಲಿ ಎರಡು ಪ್ರಧಾನಿ, ಎರಡು ರಾಷ್ಟ್ರ ಧ್ವಜ, ಎರಡು ಸಂವಿಧಾನ ನಡೆಯದು ಎಂದು ತೀವ್ರ ಹೋರಾಟ ಕೈಗೊಂಡ ಕಾಲದಲ್ಲಿಯೇ ಕಾಶ್ಮೀರದಲ್ಲಿ ಬಂಧನವಾಗಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು. ಅಂದಿನ ಅವರ ತ್ಯಾಗ ಬಲಿದಾನ ಸಂಕಲ್ಪಗಳು ವ್ಯೆರ್ಥವಾಗದೆ ಏಳು ದಶಕದ ನಂತರ ಈಗ ಈಡೇರಿತು ಎಂಬುದು ಪ್ರತಿ ಹೋರಾಟಗಾರರಿಗೂ ಸಂತಸದ ಸಂಗತಿ ಎಂದು ನಾಗರಾಜ ಕುಲಕರ್ಣಿ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ ದೇಶದ ಅಖಂಡತೆ ಮತ್ತು ಸಮಗ್ರತೆಗಾಗಿ ಶ್ಯಾಮ ಪ್ರಸಾದ ಮುಖರ್ಜಿ ಅವರ ಸೇವೆ ಅನುಪಮ ಮತ್ತು ಅಪಾರವಾದದ್ದು. ಸ್ವಾರ್ಥವಿಲ್ಲದ ಅವರ ಬದುಕು, ಸದ್ವಿಚಾರದಿಂದ ವಿಮುಖರಾಗದ ಅವರ ಹೋರಾಟ, ಧ್ಯೇಯ ನಿಷ್ಟ, ಪಕ್ಷ ನಿಷ್ಟವಾದ ವ್ಯೆಕ್ತಿತ್ವ, ದೇಶವೇ ಮೊದಲು ಎಂಬ ಅವರ ದೃಷ್ಟಿಕೋಣವು ನಮಗೆಲ್ಲ ಮಾದರಿಯಾಗಿದೆ.ಅವರ ತತ್ವ ಸಿದ್ಧಾಂತಗಳ ಅಡಿಯಲ್ಲಿ ಬೆಳೆದ ಭಾರತೀಯ ಜನತಾ ಪಾರ್ಟಿ ಇಂದು ಪ್ರತಿ ಭಾರತೀಯನ ಮೊದಲ ಆಯ್ಕೆಯಾಗಿದೆ ಎಂದು ಹೇಳಿದರು.
ಅತಿಥಿಗಳಾದ ಶ್ರೀಪತಿ ಉಡುಪಿ, ಎಂ ಎಸ್ ಕರಿಗೌಡ್ರ ಮಾತನಾಡಿದರು. ಜಗನ್ನಾಥಸಾ ಭಾಂಡಗೆ,ಬಸವಣ್ಣೆಪ್ಪ ಚಿಂಚಲಿ,ಸುರೇಶ ಮರಳಪ್ಪನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಸುಧೀರ ಕಾಟೀಗರ, ಅಶೋಕ ಕುಡತಿನಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಸಿದ್ದು ಮೊರಬದ, ರಮೇಶ ಸಜ್ಜಗಾರ, ಶಂಕರ ಖಾಕಿ, ದೇವೇಂದ್ರಪ್ಪ ಗೋಟುರ, ಅಪ್ಪಣ್ಣ ಟೆಂಗಿನಕಾಯಿ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ರ, ದೇವೇಂದ್ರಪ್ಪ ಹೂಗಾರ, ಕುಮಾರ ಮಾರನಬಸರಿ, ಸಂತೋಷ ಕಲ್ಯಾಣಿ, ರಾಚಯ್ಯ ಹೊಸಮಠ, ವಿನೋದ ಹಂಸನೂರ ಮುಂತಾದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP