ಕೋಲಾರ, ೨೩ ಜೂನ್ (ಹಿ.ಸ) :
ಆ್ಯಂಕರ್ : ಜಿಲ್ಲಾದ್ಯಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಚಟುವಟಿಕೆಗಳನ್ನು ಬಿರುಸುಕೊಳಿಸಬೇಕು. ಮೀಸಲಾತಿ ಪಡೆದ ನೌಕರರ ನಡೆ ಡಾ. ಬಿ.ಆರ್.ಅಂಬೇಡ್ಕರ್ರವರ ವಿಚಾರಗಳು ಮತ್ತು ಆದರ್ಶಗಳನ್ನು ಪಾಲನೆ ಮಾಡಬೇಕು. ಈಗಾಗಲೇ ಕೇಂದ್ರ ಸಮಿತಿ ಅನುಮತಿಯಿಲ್ಲದೆ ಸಮಿತಿಯ ಪುನರ್ ರಚನೆಯಲ್ಲಿ ಎನ್.ಮುನಿರಾಜು ರವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನಿಯಮ ಬಾಹಿರವಾಗಿದ್ದು, ಬೈಲಾ ನಿಯಮದಲ್ಲಿ ಅವಕಾಶವಿರುವುದಿಲ್ಲ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷರಾದ ಡಿ.ಶಿವಕುಮಾರ್ ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಕೇಂದ್ರ ಸಮಿತಿಯು ನಚಿಕೇತ ನಿಲಯದ ಆವರಣದಲ್ಲಿರುವ ಬುದ್ಧ ಮಂದಿರದಲ್ಲಿ ಆಯೋಜಿಸಿದ್ದ ಕೋಲಾರ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋಲಾರ ಜಿಲ್ಲಾ ಹಾಗೂ ತಾಲ್ಲೂಕುಗಳ ಎಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರ್ವಾನುಮತದಿಂದ ಸದರಿ ಜಿಲ್ಲಾಧ್ಯಕ್ಷ ಸ್ಥಾನವನ್ನು ಸರಾಸಗಟಾಗಿ ತಳ್ಳಿ ಹಾಕಿಹಾಕಲಾಗಿದ್ದು, ಗೊಂದಲಗಳಿಗೆ ತೆರೆ ಎಳೆಯಲಾಗಿದೆ. ಕೇಂದ್ರ ಸಮಿತಿಯ ಹಾಗೂ ಎಲ್ಲಾ ತಾಲ್ಲುಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸರ್ವಾನುಮತದಿಂದ ರಾಮಾಂಜನೇಯರವರನ್ನು ಸಮಿತಿಯ ಜಿಲ್ಲಾ ಅಧ್ಯಕ್ಷರನ್ನಾಗಿ ಮುಂದಿನ ಆದೇಶದವರಿಗೆ ಅನುಮೋದಿಸಿದ್ದು ಮುಂದುವರೆಸಲಾಗಿದೆ. ಗೌರವಾಧ್ಯಕ್ಷರಾಗಿ ಜಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯನ್ನಾಗಿ ಮುಕುಂದ, ಉಪಾಧ್ಯಕ್ಷರುಗಳಾಗಿ ಕೃಷ್ಣಮೂರ್ತಿ ಹಾಗೂ ಎನ್.ಮುನಿರಾಜು, ಖಜಾಂಚಿಯನ್ನಾಗಿ ಪದ್ಮಾವತಮ್ಮ ಸಹ ಕಾರ್ಯದರ್ಶಿಗಳನ್ನಾಗಿ ಬಾಲಾಜಿ, ಡಾ|| ನಾರಾಯಣಸ್ವಾಮಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರನ್ನಾಗಿ ಸುನೀತ ಹಾಗೂ ಜಂಟಿ ಕಾರ್ಯದರ್ಶಿಗಳಾಗಿ ವಿಜಯಲಕ್ಷ್ಮಿ ಅವರನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷರಾದ ರಾಮಾಂಜನೇಯ ಮಾತನಾಡಿ ಜಿಲ್ಲಾದ್ಯಂತ ಸಮಿತಿಯನ್ನು ಬಲವರ್ದನೆಗೊಳಿಸುವುದರ ಜೊತೆಗೆ ಸಮಿತಿಗೆ ಸದಸ್ಯತ್ವ ನೊಂದಾಯಿಸಿ ಸಮಿತಿಯು ನೊಂದ ನೌಕರರಿಗೆ ಸ್ಪಂದಿಸುವ0ತಾಗಬೇಕು. ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ನೀಡಿರುವ ಮೀಸಲಾತಿಯನ್ನು ಪಡೆದು ನೌಕರರಾಗಿರುವ ನಾವು ಕನಿಷ್ಟ ಅವರ ತತ್ವ ಸಿದ್ದಾಂತಗಳನ್ನು ಪಾಲಿಸಬೇಕೆಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ವಿಜಯ್ಕುಮಾರ್ ಉಪಾಧ್ಯಕ್ಷರುಗಳಾದ ಕೆಂಪಸಿದ್ದಯ್ಯ ಹಾಗೂ ಮೋಹನ್, ಮಾಲೂರು ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಗೌರಪ್ಪ (ರವಿಕುಮಾರ್ ವೆಂಕಟೇಶ್), ಮಾಲೂರು ಪದಾಧಿಕಾರಿಗಳು ಕೆ.ಜಿ.ಎಫ್ ತಾಲ್ಲೂಕು ಅಧ್ಯಕ್ಷರಾದ ಅಶ್ವಥ್, ಪ್ರಧಾನ ಕಾರ್ಯದರ್ಶಿಯಾದ ಗಂಗಾಧರ್, ಬಂಗಾರಪೇಟೆ ಅಧ್ಯಕ್ಷರಾದ ನಾಗರಾಜ, ಪದಾಧಿಕಾರಿ ದ್ಯಾವಪ್ಪ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷರಾದ ಬಿ.ಎನ್.ನಾರಾಯಣಸ್ವಾಮಿ, ಶ್ರೀನಿವಾಸಪುರ ಅಧ್ಯಕ್ಷರಾದ ಎಸ್.ಎಂ.ಮುನಿವೆ0ಕಟಪ್ಪ ಹಾಗೂ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಸುನೀತ ಭಾಗವಹಿಸಿದ್ದರು.
ಚಿತ್ರ : ಕೋಲಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಸಭೆ ನಡೆಯಿತು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್