ಜುಲೈ ಮೊದಲ ವಾರದಲ್ಲಿ `ಸೆಪ್ಟಂಬರ್-10' ಸಿನಿಮಾ ಬಿಡುಗಡೆ : ಓಂ ಸಾಯಿ ಪ್ರಕಾಶ್
ಬಳ್ಳಾರಿ, 23 ಜೂನ್ (ಹಿ.ಸ.) : ಆ್ಯಂಕರ್ : ಕ್ಷುಲ್ಲಕ ಕಾರಣಗಳಿಗಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಉಳ್ಳವರಿಗೆ ಆತ್ಮಸ್ಥೈರ್ಯ ತುಂಬುವ ಸಾಮಾಜಿಕ ಕಥೆಯ `ಸೆಪ್ಟೆಂಬರ್ -10'' ಚಲನಚಿತ್ರವು ಜೂಲೈ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕ ಓಂ ಸಾಯಿ ಪ್ರಕಾಶ್
ಜುಲೈ ಮೊದಲವಾರದಲ್ಲಿ `ಸೆಪ್ಟಂಬರ್-10' ಸಿನಿಮಾ ಬಿಡುಗಡೆ : ಓಂ ಸಾಯಿ ಪ್ರಕಾಶ್


ಜುಲೈ ಮೊದಲವಾರದಲ್ಲಿ `ಸೆಪ್ಟಂಬರ್-10' ಸಿನಿಮಾ ಬಿಡುಗಡೆ : ಓಂ ಸಾಯಿ ಪ್ರಕಾಶ್


ಬಳ್ಳಾರಿ, 23 ಜೂನ್ (ಹಿ.ಸ.) :

ಆ್ಯಂಕರ್ : ಕ್ಷುಲ್ಲಕ ಕಾರಣಗಳಿಗಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಉಳ್ಳವರಿಗೆ ಆತ್ಮಸ್ಥೈರ್ಯ ತುಂಬುವ ಸಾಮಾಜಿಕ ಕಥೆಯ `ಸೆಪ್ಟೆಂಬರ್ -10' ಚಲನಚಿತ್ರವು ಜೂಲೈ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಧೈರ್ಯಬೇಕು. ಅದೇ ಧೈರ್ಯವನ್ನು ಬದುಕನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಲು ಏಕೆ ಸಾಧ್ಯವಿಲ್ಲ? ಎನ್ನುವ ವಿಚಾರದೊಂದಿಗೆ ಚಿತ್ರ ರೂಪುಗೊಂಡಿದೆ. ಈ ಚಿತ್ರವು ನನ್ನ 105ನೇ ಚಿತ್ರವಾಗಿದೆ. ಪ್ರೇಕ್ಷಕರು ಕಥೆ, ಹೊಸ ನಾಯಕ ನಟ ಮತ್ತು ವಿಶೇಷತೆಯನ್ನು ಸ್ವಾಗತಿಸುವ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದ ಪೆÇೀಷಕ ನಟ ಗಣೇಶರಾವ್ ಅವರು, ಒಂ ಸಾಯಿ ಪ್ರಕಾಶ್ ಅವರು 105 ಚಲನಚಿತ್ರಗಳನ್ನು ನಿರ್ದೇಶನ ಮಾಡಿದ್ದು, 90 ಚಿತ್ರಗಳು ಶತದಿನೋತ್ಸವ ಆಚರಿಸಿವೆ. `ಸೆಪ್ಟಂಬರ್ -10' ಅತ್ಯಂತ ವಿಶೇಷ ಕಥಾಹಂದರವನ್ನು - ಕೌಟುಂಬಿಕ ಚಿತ್ರಣವನ್ನು ಹೊಂದಿದೆ. ಜಿ.ಜಿ. ಕೃಷ್ಣ ಅವರು ಛಾಯಾಗ್ರಹಣ ಮಾಡಿದ್ದು, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಚಿತ್ರ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನಟರಾಜ ಕಾಂಪ್ಲೆಕ್ಸ್ ಚಿತ್ರಮಂದಿರಗಳ ವ್ಯವಸ್ಥಾಪಕ ಲಕ್ಷ್ಮಿಕಾಂತರೆಡ್ಡಿ, ಚಿತ್ರನಟ ಬಳ್ಳಾರಿ ಮಂಜು ಮತ್ತು ಚಿತ್ರದ ನಾಯಕ ಜಯಸಿಂಹ ಹಾಗೂ ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande