ರಾಯಪುರ್, 22 ಜೂನ್ (ಹಿ.ಸ.) :
ಆ್ಯಂಕರ್ : ಎರಡು ದಿನಗಳ ಛತ್ತೀಸ್ಗಢ ಪ್ರವಾಸದಲ್ಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಂದು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮತ್ತು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಭೂಮಿ ಪೂಜೆ ನೆರವೇರಿಸಿದರು.
ನವ ರಾಯ್ಪುರದ ಬಂಜಾರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ, ವಿಧಾನಸಭಾಧ್ಯಕ್ಷ ಡಾ. ರಮಣ್ ಸಿಂಗ್, ಉಪಮುಖ್ಯಮಂತ್ರಿಗಳಾದ ಅರುಣ್ ಸಾ ಮತ್ತು ವಿಜಯ್ ಶರ್ಮಾ, ಬಿಜೆಪಿ ರಾಜ್ಯಾಧ್ಯಕ್ಷ ಕಿರಣ್ ಸಿಂಗ್ ದೇವ್, ಸಚಿವ ಕೇದಾರ್ ಕಶ್ಯಪ್, ಸಂಸದ ಬ್ರಿಜ್ಮೋಹನ್ ಅಗರ್ವಾಲ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಈ ಹೊಸ ಅಧಿಸಂಸ್ಥೆಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅನುಭವದೊಂದಿಗೆ ವಿಧಿವಿಜ್ಞಾನ ತಜ್ಞರನ್ನು ಸಿದ್ಧಪಡಿಸಿ, ಅಪರಾಧ ತನಿಖೆಗಳನ್ನು ವೈಜ್ಞಾನಿಕ ಮತ್ತು ಪಾರದರ್ಶಕವಾಗಿ ನಡೆಸುವಲ್ಲಿ ಸಹಕಾರ ನೀಡಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa