ಇರಾನ್​ನಿಂದ ೫೦೦ಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ
ನವದೆಹಲಿ, 21 ಜೂನ್ (ಹಿ.ಸ.) : ಆ್ಯಂಕರ್ : ಇರಾನ್​ನಿಂದ ಇದುವರೆಗೂ ಆಪರೇಷನ್​ ಸಿಂಧು ಅಡಿಯಲ್ಲಿ 500ಕ್ಕೂ ಹೆಚ್ಚು ಭಾರತೀಯರು ದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇರಾನ್​- ಇಸ್ರೇಲ್​ ಸಂಘರ್ಷದ ಬಳಿಕ ಇರಾನ್​ನಲ್ಲಿರುವ ಭಾರತೀಯರನ್ನು ಕರೆತರುವ ವ್ಯವಸ್ಥೆ ಮಾಡಲಾಗಿದ್ದು, ವಿದೇಶ
ಇರಾನ್​ನಿಂದ ೫೦೦ಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ


ನವದೆಹಲಿ, 21 ಜೂನ್ (ಹಿ.ಸ.) :

ಆ್ಯಂಕರ್ : ಇರಾನ್​ನಿಂದ ಇದುವರೆಗೂ ಆಪರೇಷನ್​ ಸಿಂಧು ಅಡಿಯಲ್ಲಿ 500ಕ್ಕೂ ಹೆಚ್ಚು ಭಾರತೀಯರು ದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇರಾನ್​- ಇಸ್ರೇಲ್​ ಸಂಘರ್ಷದ ಬಳಿಕ ಇರಾನ್​ನಲ್ಲಿರುವ ಭಾರತೀಯರನ್ನು ಕರೆತರುವ ವ್ಯವಸ್ಥೆ ಮಾಡಲಾಗಿದ್ದು, ವಿದೇಶಾಂಗ ಸಚಿವಾಲಯವು ಸ್ಥಳಾಂತರಿಸುವ ಕಾರ್ಯಾಚರಣೆಯ ಸ್ಥಿತಿಯ ಕುರಿತು ಮಾಹಿತಿ ನೀಡಿದೆ.

ಸ್ಥಳಾಂತರ ನಡೆಸಿದವರಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳಿದ್ದು, ಅವರೆಲ್ಲಾ ಶುಕ್ರವಾರ ತಡರಾತ್ರಿ ದೆಹಲಿ ತಲುಪಿಸಿದ್ದಾರೆ.

ಆಪರೇಷನ್​ ಸಿಂಧು ವಿಮಾನಗಳು ಭಾರತೀಯ ನಾಗರಿಕರನ್ನು ಮರಳಿ ಕರೆತರುತ್ತಿವೆ. ಇರಾನ್​ನಿಂದ 290 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಧಾರ್ಮಿಕ ಯಾತ್ರಾರ್ಥಿಗಳು ಇದ್ದಾರೆ.

ಜೂನ್​ 20ರಂದು ರಾತ್ರಿ 11.30ಕ್ಕೆ ನವದೆಹಲಿಗೆ ವಿಮಾನವನ್ನು ಕಾರ್ಯದರ್ಶಿ ಅರುಣ್​ ಚಟರ್ಜಿ ಸ್ವಾಗತಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಂದೀರ್​​ ಜೈಸ್ವಾಲ್​ ಎಕ್ಸ್​ ಜಾಲತಾಣದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande