ಹೊಸಪೇಟೆ, 21 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರ ಮತ್ತು ಸಸ್ಯ ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ಕಸಿ,ಸಸಿಗಳನ್ನು ಉತ್ಪಾದಿಸಿ. ರೈತರಿಗೆ ಇಲಾಖೆಯ ದರದಲ್ಲಿ ವಿತರಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಪ್ರದೇಶ ವಿಸ್ತರಣೆ ಕೈಗೊಳ್ಳುವ ರೈತ ಭಾಂದವರು ತೋಟಗಾರಿಕೆ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರದ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳು. ಮಾವು, ಸಪೋಟ, ಪೇರಲ, ನಿಂಬೆ, ಕರಿಬೇವು, ನೇರಳೆ ಮತ್ತು ನುಗ್ಗೆ ಹಾಗೂ ವಿವಿಧ ಅಲಂಕಾರಿಕ ಸಸಿಗಳು ಮಾರಾಟಕ್ಕೆ ಲಭ್ಯವಿವೆ. ರೈತ ಭಾಂದವರು ಹಾಗೂ ಸಾರ್ವಜನಿಕರು ಖರೀದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಾಗತಿಬಸಾಪುರ ತೋಟಗಾರಿಕೆ ಕ್ಷೇತ್ರ, ಹೂವಿನಹಡಗಲಿ ಮೊ. 9686508432, 9148297982, ಮಾಲವಿ ತೋಟಗಾರಿಕೆ ಕ್ಷೇತ್ರ, ಹಗರಿಬೊಮ್ಮನಹಳ್ಳಿ ಮೊ.9880367794, 8495882552, 9900775894, ಬುಕ್ಕಸಾಗರ ತೋಟಗಾರಿಕೆ ಕ್ಷೇತ್ರ ಹೊಸಪೇಟೆ ಮೊ.9591521042, ಕೊಟ್ಟೂರು ತೋಟಗಾರಿಕೆ ಕ್ಷೇತ್ರ ಮೊ.9663832857, ಕೆ.ಕಲ್ಲಹಳ್ಳಿ ತೋಟಗಾರಿಕೆ ಕ್ಷೇತ್ರ, ಹರಪನಹಳ್ಳಿ ಮೊ.7892383890, ಆನಂದ ದೇವನಹಳ್ಳಿ, ತೋಟಗಾರಿಕೆ ಕ್ಷೇತ್ರ ಹಗರಿಬೊಮ್ಮನಹಳ್ಳಿ ಮೊ. 9742968270, ಚಿಕ್ಕಜೋಗಿಹಳ್ಳಿ, ತೋಟಗಾರಿಕೆ ಕ್ಷೇತ್ರ ಕೂಡ್ಲಿಗಿ ಮೊ.9483923322, ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್