ಮುಖ್ಯಮಂತ್ರಿಗೆ ಮುಚ್ಚಿದ ಮುಖ್ಯ ಬಾಗಿಲು
ಗದಗ, 3 ಜೂನ್ (ಹಿ.ಸ.) : ಆ್ಯಂಕರ್ : ಗದಗ ನಗರದ ಭೀಮಸೇನ ಜೋಷಿ ರಂಗಮಂದಿರದಲ್ಲಿ ಮಂಗಳವಾರ ನಡೆಯಬೇಕಾಗಿದ್ದ “ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ” ಉದ್ಘಾಟನಾ ಕಾರ್ಯಕ್ರಮದಲ್ಲಿ ಅಸಾಧಾರಣ ತಿರುವು ಕಂಡು ಬಂದಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಭಾಂಗಣದ
ಪೋಟೋ


ಗದಗ, 3 ಜೂನ್ (ಹಿ.ಸ.) :

ಆ್ಯಂಕರ್ : ಗದಗ ನಗರದ ಭೀಮಸೇನ ಜೋಷಿ ರಂಗಮಂದಿರದಲ್ಲಿ ಮಂಗಳವಾರ ನಡೆಯಬೇಕಾಗಿದ್ದ “ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ” ಉದ್ಘಾಟನಾ ಕಾರ್ಯಕ್ರಮದಲ್ಲಿ ಅಸಾಧಾರಣ ತಿರುವು ಕಂಡು ಬಂದಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಭಾಂಗಣದ ಒಳಗೆ ಪ್ರವೇಶಿಸದೇ, ಸಭಾಂಗಣದ ಹೊರಗಡೆ ಕೆಲ ಹೊತ್ತು ಪರದಾಟ ನಡೆಸಿ ಕೊನೆಗೆ ಕಾರ್ಯಕ್ರಮ ಉದ್ಘಾಟಿಸದೇ ವಾಪಸ್ ತೆರಳಿದ್ದಾರೆ.

ಈ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆಗಳನ್ನೂ ಮಾಡಲಾಗಿತ್ತು. ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಎಲ್ಲವೂ ಸಜ್ಜಾಗಿದ್ದರು. ಆದರೆ ಮುಖ್ಯಮಂತ್ರಿ ಆಗಮಿಸಲು ನಿಗದಿಪಡಿಸಿದ್ದ ದಾರಿಯಲ್ಲಿ ಮೆಟ್ಟಿಲು ಇದ್ದ ಕಾರಣ, ಸಿದ್ದರಾಮಯ್ಯ ಮೆಟ್ಟಿಲು ಮೂಲಕ ಸಭಾಂಗಣದ‌ ಒಳಗಡೆ ಪ್ರವೇಶಿಸಲು ನಿರಾಕರಿಸಿದರು.

ನಂತರ ಅವರು‌ ಸಭಾಂಗಣದ ಎಡಭಾಗದ ಸರಳ ಮಾರ್ಗದಿಂದ ಒಳಗೆ ಬರುವ ಯತ್ನ ನಡೆಸಿದರು.ಅಲ್ಲಿಯ ಗೇಟ್ ಕೂಡ ವೆಲ್ಡಿಂಗ್ ಮೂಲಕ ಬಾಗಿಲನ್ನ ಬಂದ್ ಮಾಡಲಾಗಿತ್ತು.

ನಂತರ ಸಭಾಂಗಣದ ಬಲಭಾಗದ ದಾರಿಗೆ‌ ಮುಖ್ಯಮಂತ್ರಿಗಳನ್ನು ಸಚಿವ ಹೆಚ್.ಕೆ.ಪಾಟೀಲ ಮನವೊಲಿಸಿ, ‌ಕರೆತಂದರೂ ಸಹ, ಅಲ್ಲಿಯೂ ಸಹ ಬಾಗಿಲು ಬಂದ್ ಆಗಿತ್ತು. ಕೀಲಿ ಹಾಕಿತ್ತು ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಬಾಗಿಲಿನ ಕೀಲಿ ಮುರಿಯಬೇಕಾಯಿತು.

ನಂತರ ಮುಂದೆ ಮತ್ತೊಂದು ಕಬ್ಬಿಣದ ಗೇಟ್ ಕೂಡ ಮುರಿಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಷ್ಟೊತ್ತಿಗಾಗಲೇ‌ ಅಮೂಲ್ಯ 15 ನಿಮಿಷಗಳ ಹಾಳಾಗಿತ್ತು.

ಈ ಎಲ್ಲಾ ಗಲಿಬಿಲಿಯ ನಡುವೆ, ಮುಖ್ಯಮಂತ್ರಿ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಬೇಕಿದ್ದ ಕಾರಣ, ಅನಿವಾರ್ಯವಾಗಿ ಅವರು ಯಾವುದೇ ಕಾರ್ಯಕ್ರಮವನ್ನೂ ಉದ್ಘಾಟಿಸದೇ ಹೆಲಿಪ್ಯಾಡ್ ಗೆ ತೆರಳಿದರು.

ನಂತರ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ‌ ಸಚಿವರಾದ ಹೆಚ್.ಕೆ.ಪಾಟೀಲ‌ ಹಾಗೂ ಪೌರಾಡಳಿತ ಸಚಿವ ರಹೀಂಖಾನ್ ನೇತೃತ್ವದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಈ ವೇಳೆ, ಹೆಚ್.ಕೆ.ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಅವರಿಗೆ ಕಾಲು ನೋವು ಇದ್ದ ಕಾರಣ ಸಭಾಂಗಣದ ಹೊರಗಡೆಯೇ ಪೇಚಾಟ ನಡೆಸಿದೆವು. ಸಭಾಂಗಣದ ಎರಡೂ ಕಡೆಯ ಬಾಗಿಲು ಬಂದ್ ಆಗಿದ್ದರಿಂದಲೋ, ಅಥವಾ ಅಚಾತುರ್ಯವೋ ಎನ್ನುವಂತೆ ಹೆಲಿಕಾಪ್ಟರ್ ಮೂಲಕ ತೆರಳಬೇಕಾಗಿದ್ದರಿಂದ ಸಮಯದ‌ ಅಭಾವ ಆಯಿತು. ಹೀಗಾಗಿ ಮುಖ್ಯಮಂತ್ರಿ ಅವರು ಪೌರಾಡಳಿತ ಸಚಿವರಿಗೆ ಈ ಉದ್ಘಾಟನೆ ಜವಾಬ್ದಾರಿ ವಹಿಸಿ ತೆರಳಿದ್ದಾರೆ ಎಂದು ಸಭಿಕರಿಗೆ ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande