ಗದಗ, 02 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ರೋಣ ಪಟ್ಟಣದ
ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ 2024-2026 ನೇ ಸಾಲಿನ ಗದಗ ಜಿಲ್ಲಾ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಸದಸ್ಯರ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಜಯಕುಮಾರ ಬ್ಯಾಳಿಯವರು ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿರುವ ಡಾ. ಶ್ರೀಮತಿ ಪಾರ್ವತಿ ರಣತೂರರವರು ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ್ದರು. ಗದಗ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾ. ಎಸ್ಆರ್ ಹಿರೇಮಠ ರವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಕೆ ಬಿ ಧನ್ನೂರ, ರಾಜ್ಯ ಘಟಕದ ಖಜಾಂಚಿಗಳಾದ ಡಾ. ಶ್ರೀನಿವಾಸ ಹ್ಯಾಟಿ, ವಿದ್ಯಾರ್ಥಿ ಘಟಕದ ಚೇರಮನ್, ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾಕ್ಟರ್ ಐ ಬಿ ಕೊಟ್ಟೂರಶೆಟ್ಟಿಯವರು ಮುಖ್ಯ ಅತಿಥಿ ಸ್ಥಾನಗಳನ್ನು ವಹಿಸಿದ್ದರು.
ವೇದಿಕೆಯ ಮೇಲೆ ಗದಗ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಡಾ. ಬಸವರಾಜ ಚನ್ನಪ್ಪಗೌಡರ, ಖಜಾಂಚಿಗಳಾದ ಡಾ. ಗಿರೀಶ ಬಡಿಗೇರ, ಗದಗ ಜಿಲ್ಲಾ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಡಾ. ರಾಜೇಶ್ವರಿ ಹಿರೇಮಠ, ಕಾರ್ಯದರ್ಶಿಗಳಾದ ಹಸೀನಾ ಭಾವನಗರಿಯವರು ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮೊದಲು ಧನ್ವಂತರಿ ಪ್ರಾರ್ಥನೆಯಿಂದ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಂತರ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶಶಿಕಲಾ ಬಾನಿ ಯವರು ಸ್ವಾಗತ ಭಾಷಣ ಮಾಡಿದರು. ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಐ ಬಿ ಕೊಟ್ಟೂರ ಶೆಟ್ಟಿಯವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಕಾರ್ಯಕ್ರಮವನ್ನು ಡಾ. ಶ್ರೀಮತಿ ಪಾರ್ವತಿ ರಣತೂರರವರು ವಿದ್ಯುಕ್ತವಾಗಿ ಉದ್ಘಾಟನೆಯನ್ನು ಮಾಡಿದರು.
ಡಾ. ಎಸ್ ಆರ್ ಹಿರೇಮಠರವರು ಗದಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಅಧ್ಯಕ್ಷರಾಗಿ ಡಾ. ಸರೋಜಾ ರಾಮಣ್ಣವರ, ಕಾರ್ಯದರ್ಶಿಗಳಾಗಿ ಡಾ. ವಾಣಿ ಚವಡಿ ಹಾಗೂ ಖಜಾಂಚಿಗಳಾಗಿ ಡಾ. ಮಂಗಳಾ ಪಾಟೀಲ ಅಧಿಕಾರವನ್ನು ವಹಿಸಿದರು.
ನಂತರ ನೂತನ 53 ಸದಸ್ಯರ ಪಟ್ಟಿಯನ್ನು ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಜಯಕುಮಾರ್ ಬ್ಯಾಳಿ ಹಾಗೂ ಗೌರವ ಅಧ್ಯಕ್ಷರಾದ ಡಾ. ಎಸ್ ಆರ್ ಹಿರೇಮಠ ರವರಿಗೆ ಹಸ್ತಾಂತರಿಸಲಾಯಿತು . ನೂತನ ಸದಸ್ಯರಿಗೆ ಪುಷ್ಪವನ್ನು ನೀಡುವುದರ ಮುಖಾಂತರ ಗದಗ ಜಿಲ್ಲಾ ಘಟಕಕ್ಕೆ ಸ್ವಾಗತಿಸಲಾಯಿತು.
ನಂತರ ಉದ್ಘಾಟನೆ ಮಾಡಿದಂತಹ ಡಾ. ಶ್ರೀಮತಿ ಪಾರ್ವತಿ ರಣತೂರ ರವರು ಮಾತನಾಡಿ ಪ್ರಸಕ್ತ ತಮ್ಮ ಅವಧಿಯಲ್ಲಿ ಮಹಿಳಾ ಘಟಕದ ಪದಾಧಿಕಾರಿಗಳು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಮಾಡಬೇಕೆಂದು ತಿಳಿಸಿದರು.
ವೇದಿಕೆ ಮೇಲಿದ್ದ ಎಲ್ಲ ಗಣ್ಯ ಮಾನ್ಯರು ಸಹ ನೂತನ ಸದಸ್ಯರು ಹಾಗೂ ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಡಾ. ಕೆ ಬಿ ಧನ್ನೂರ್ ಡಾ.ಐ ಬಿ ಕೊಟ್ಟೂರ್ ಶೆಟ್ಟಿ , ಡಾ. ಶ್ರೀಮತಿ ಪಾರ್ವತಿ ರಣತೂರ್, ಡಾ. ಶ್ರೀನಿವಾಸ ಹ್ಯಾಟಿ ಇವರನ್ನು ಸನ್ಮಾನಿಸಲಾಯಿತು. ಆಯುರ್ವೇದ ಕಾಲೇಜಿನ ವತಿಯಿಂದ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಜಯಕುಮಾರ ಬ್ಯಾಳಿ, ಗೌರವಾಧ್ಯಕ್ಷರಾದ ಡಾ. ಎಸ್ಆರ್ ಹಿರೇಮಠ, ಕಾರ್ಯದರ್ಶಿಗಳಾದ ಡಾ. ಬಸವರಾಜ್ ಚನ್ನಪ್ಪ ಗೌಡರ ಹಾಗೂ ಖಜಾಂಚಿಗಳಾದ ಡಾ.ಗಿರೀಶ ಬಡಿಗೇರರವರನ್ನು ಸನ್ಮಾನಿಸಲಾಯಿತು. ಡಾ. ಆನಂದ ಕೆರಿಯವರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಡಾ. ಶ್ರೀಮತಿ ವಾಣಿ ಚವಡಿ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ನಂತರ ಎಲ್ಲರಿಗೂ ಸಹಿತ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Lalita MP