ದೇಶದ ಆರ್ಥಿಕ ಬಲವರ್ಧನೆಗೆ ಜಾತಿ ವ್ಯವಸ್ತೆ ಕಂಟಕ- ಎನ್ಎಸ್ ಬೋಸರಾಜು
ರಾಯಚೂರು, 14 ಜೂನ್ (ಹಿ.ಸ.) : ಆ್ಯಂಕರ್ : ಡಾ. ಬಿ ಆರ್ ಅಂಬೇಡ್ಕರ್ ಅವರು ಸಮ-ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಜೊತೆಗೆ ಬಹುದೊಡ್ಡ ಆರ್ಥಿಕ ತಜ್ಞರಾಗಿದ್ದರು. ದೇಶದ ಹಣಕಾಸು, ಅರ್ಥಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿದೆ.ಡಾ. ಬಿ ಆರ್ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು
ದೇಶದ ಆರ್ಥಿಕ ಬಲವರ್ಧನೆಗೆ ಜಾತಿ ವ್ಯವಸ್ತೆ ಕಂಟಕ- ಎನ್ಎಸ್ ಬೋಸರಾಜು


ದೇಶದ ಆರ್ಥಿಕ ಬಲವರ್ಧನೆಗೆ ಜಾತಿ ವ್ಯವಸ್ತೆ ಕಂಟಕ- ಎನ್ಎಸ್ ಬೋಸರಾಜು


ರಾಯಚೂರು, 14 ಜೂನ್ (ಹಿ.ಸ.) :

ಆ್ಯಂಕರ್ : ಡಾ. ಬಿ ಆರ್ ಅಂಬೇಡ್ಕರ್ ಅವರು ಸಮ-ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಜೊತೆಗೆ ಬಹುದೊಡ್ಡ ಆರ್ಥಿಕ ತಜ್ಞರಾಗಿದ್ದರು. ದೇಶದ ಹಣಕಾಸು, ಅರ್ಥಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿದೆ.ಡಾ. ಬಿ ಆರ್ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ದೇಶದ ಅಭಿವೃದ್ಧಿಗೆ ನಾಂದಿಯಾಗಿದೆ. ದೇಶದಲ್ಲಿ ಆರ್ಥಿಕ ವ್ಯವಸ್ಥೆಯ ಪಾತ್ರದ ಬಗ್ಗೆ ಮಕ್ಕಳಿಗೆ ತಿಳಿಸುವ ಕಾರ್ಯ ಶ್ಲಾಘನೀಯಾವಾಗಿದೆ. ದೇಶದ ಆರ್ಥಿಕ ಬಲವರ್ಧನೆಗೆ ಜಾತಿ ವ್ಯವಸ್ಥೆ ಕಂಟಕವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ಕಳವಳ‌ ವ್ಯಕ್ತಪಡಿಸಿದರು.

ರಾಯಚೂರಿನ‌ ಪ್ರಥಮ ದರ್ಜೆ ವಿದ್ಯಾಲಯದಲ್ಲಿ ಆಯೋಜಿಸಿದ್ದ

ಡಾ.ಬಿ.ಆರ್.ಅಂಬೇಡ್ಕರ ರವರು ರಚಿಸಿರುವ ದಿ ಪ್ರಾಬ್ಲೆಮ್ ಆಫ್ ದಿ ಇಂಡಿಯನ್ ರುಪೀ: ಇಟ್ಸ್ ಓರಿಜಿನ್ ಆಂಡ್ ಇಟ್ಸ್ ಸಲೂಷನ್ ಮಹಾಪ್ರಬಂಧದ ಶತಮಾನೋತ್ಸವ ಹಾಗೂ 371(ಜೆ) ಕಲಂ ಸಮರ್ಪಕ ಜಾರಿಯಾಗಿ ಆಯೋಜಿಸಿರುವ ರಾಷ್ಟ್ರ ಮಟ್ಟದ ವಿಚಾರ ಸಂಕೀರ್ಣ ಹಾಗೂ ರತ್ನ ಪ್ರಭಾ ಸಂಚಿಕೆ ಬಿಡುಗಡೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಕರಾಗಿ ರಾಯಚೂರು ಲೋಕಸಭೆ ಸಂಸದರಾದ ಜಿ ಕುಮಾರ ನಾಯಕ ಮಾತನಾಡಿ, ಡಾ‌. ಅಂಬೇಡ್ಕರ್ ಅವರ ಅವರ ಆರ್ಥಿಕ ಚಿಂತನೇಗಳು ಹಿಂದೆ, ಇಂದು, ಮುಂದೆಯೂ ಪ್ರಸ್ತುತವಾಗಿದೆ ಅಲ್ಲದೆ ಅವರ ಆರ್ಥಿಕ ಚಿಂತನೆಗಳು ಮತ್ತು ದೇಶದ ಅಭಿವೃದ್ಧಿಗೆ ನಾಂದಿಯಾಗಿದೆ. ರೂಪಾಯಿ ಮೌಲ್ಯದ ಕುರಿತು ವಿದ್ಯಾರ್ಥಿಗಳು, ಸಾರ್ವಜನಿಕರು ಅರಿಯಬೇಕಾಗಿದೆ. ದೇಶದ ಆರ್ಥಿಕ ಮೌಲ್ಯದ ಮಹತ್ವದ ಬಗ್ಗೆ ತಿಳಿಸುವ ಇಂತಹ ಕಾರ್ಯಕ್ರಮಗಳ ಆಯೋಜನೆ ಅವಶ್ಯಕವಾಗಿದೆ ಎಂದರು.

ಡಾ. ಬಿ.ಆರ್.ಅಂಬೇಡ್ಕರ ರವರು ಪ್ರತಿಪಾದಿಸಿರುವ ಆಚಾರ-ವಿಚಾರಗಳು ಹಾಗೂ ಆರ್ಥಿಕ ವಿಷಯಗಳ ಬಗ್ಗೆ ಅರಿವು ಮೂಡಿಸುವ ಸಂಬಂಧ ಈ ಎರಡು ವಿಷಯಗಳು ಸೇರಿದಂತೆ ಇನ್ನೂ ಇಂತಹ ಹತ್ತು-ಹಲವಾರು ವಿಷಯಗಳನ್ನೊಳಗೊಂಡ ಮತ್ತು ಅಂತರ ಶಿಸ್ತಿಯ ಲೇಖನಗಳುಳ್ಳ ರತ್ನ ಪ್ರಭಾ ಎಂಬ ಸಂಚಿಕೆ ಬಿಡುಗಡೆ ಮಾಡುವಲ್ಲಿ ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎನ್. ರಾವು ಕೋಶದ ಅರ್ಥಶಾಸ್ತ್ರ ವಿಭಾಗದ ಪಾತ್ರವು ತುಂಬಾ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಹಾಗೂ ರಾಯಚೂರು ಲೋಕಸಭಾ ಸಂಸದರಾದ ಜಿ ಕುಮಾರ್ ನಾಯಕ್ ಅವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ವೆಂಕಣ್ಣ, ಉಪನ್ಯಾಸಕರುಗಳಾದ ಪ್ರಾಣೇಶ್ ಕುಲಕರ್ಣಿ, ಕಾಂಗ್ರೆಸ್ ಮುಖಂಡರಾದ ಜಯಣ್ಣ, ರುದ್ರಪ್ಪ ಅಂಗಡಿ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೃಷ್ಣ ಶಾವಂತಿಗೆರ, ಕಮಲ್ ಕುಮಾರ್ ಜೈನ್, ಡಾ, ಶೋಭಾ, ಸೇರಿದಂತೆ ಅನೇಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande