ರಸ್ತೆ ಕಾಮಗಾರಿ ಮುಗಿಸಲು ಒತ್ತಾಯಿಸಿದ ಸಾರ್ವಜನಿಕರು
ಗದಗ, 13 ಜೂನ್ (ಹಿ.ಸ.): ಆ್ಯಂಕರ್: ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜುವರೆಗಿನ ದ್ವಿಪಥ ರಸ್ತೆ ದುರಸ್ತಿ ಕಾಮಗಾರಿ ಕಳೆದ ಮೂರು ತಿಂಗಳಿನಿಂದ ಕುಂಟುತ್ತ ಸಾಗಿರುವದಕ್ಕೆ, ಕಾಮಗಾರಿ ವಿಳಂವಾಗುತ್ತಿರುವುದಕ್ಕೆ, ನರೇಗಲ್ಲ ಪಟ್ಟಣದ ವಿದ್ಯಾರ್ಥಿಗಳು, ಸಾರ್ವಜನಿಕರು ಪಟ್ಟಣ ಪಂಚಾಯತಿ ಎದ
ಪೋಟೋ


ಗದಗ, 13 ಜೂನ್ (ಹಿ.ಸ.):

ಆ್ಯಂಕರ್:

ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜುವರೆಗಿನ ದ್ವಿಪಥ ರಸ್ತೆ ದುರಸ್ತಿ ಕಾಮಗಾರಿ ಕಳೆದ ಮೂರು ತಿಂಗಳಿನಿಂದ ಕುಂಟುತ್ತ ಸಾಗಿರುವದಕ್ಕೆ, ಕಾಮಗಾರಿ ವಿಳಂವಾಗುತ್ತಿರುವುದಕ್ಕೆ, ನರೇಗಲ್ಲ ಪಟ್ಟಣದ ವಿದ್ಯಾರ್ಥಿಗಳು, ಸಾರ್ವಜನಿಕರು ಪಟ್ಟಣ ಪಂಚಾಯತಿ ಎದುರು ಪ್ರತಿಭಟನೆ ನಡೆಸಿ ಕಾಮಗಾರಿ ಬೇಗನೆ ಮುಕ್ತಾಯವಾಗುವಂತೆ ಮಾಡಬೇಕೆಂದು ಮುಖ್ಯಾಧಿಕಾರಿ ಮತ್ತು ಇಂಜಿನೀಯರರನ್ನು ಒತ್ತಾಯಿಸಿದರು.

ಸಾರ್ವಜನಿಕರ ಪರವಾಗಿ ಮಾತನಾಡಿದ ರಘುನಾಥ ಕೊಂಡಿ ಈ ಕಾಗಾರಿಗೆ ಯಾರೂ ದಿಕ್ಕು ದೆಸೆ ಇಲ್ಲದಂತಾಗಿದೆ. ಇದಕ್ಕೂ ಮೇಲಾಗಿ ನಾವು ಏನು ಮಾಡಿದರೂ ನಡೆಯುತ್ತದೆ. ನಮಗೆ ಹೇಳುವವರು ಕೇಳುವವರು ಯಾರೂ ಇಲ್ಲ ಎಂಬ ಮನೋಭಾವನೆ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿದೆ. ಅದಕ್ಕಾಗಿಯೆ ಇಂದು

ನಾವು ಕೇಳಲು ಬಂದಿದ್ದೇವೆ.

ನಾವು ಇಲ್ಲಿಗೆ ಕೇಳಲು ಬಾರದಂತೆ ನೋಡಿಕೊಳ್ಳಬೇಕಾದುದು ನಿಮ್ಮ ಜವಾಬ್ದಾರಿ. ಆದರೆ ನಿಮ್ಮ ಬೇಜವಾಬ್ದಾರಿತನದಿಂದ ಇಂದು ಸಹಸ್ರಾರು ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ನಿಮ್ಮನ್ನು ಕೈ ಹಿಡಿದು ಪ್ರಶ್ನಿಸಬೇಕಾಗುತ್ತದೆ ಎಂದರು. ಮಂಜುನಾಥ ಹೆಗಡೆ ಮಾತನಾಡಿ ಕಳೆದ ಮಾರ್ಚ್ 8ಕ್ಕೆ ಶಾಸಕರು ಈ ಕಾಮಗಾರಿಗೆ ಭೂಮಿ ಪೂಜೆ ಮಾಡಿದರು. ಅದು ಕಳೆದು ಒಂದು ತಿಂಗಳ ನಂತರ ಗುತ್ತಿಗೆದಾರರು ಕಾರ್ಯ ಪ್ರಾರಂಭಿಸಿದರು. ಬೆನ್ನು ಹತ್ತಿ ಈ ಕಾರ್ಯವನ್ನು ಮುಗಿಸದೆ ಅವರು

ಅನಗತ್ಯ ವಿಳಂಬ ಮಾಡುತ್ತಿರುವದರಿಂದ ಅಲ್ಲಿ ಸಂಚರಿಸಲು ನಮಗೆ ತೀವ್ರ ತೊಂದರೆಯಾಗುತ್ತಿದೆ. ಕಾಮಗಾರಿಯನ್ನು ಹಿಡಿದವರಾರು? ಅದಕ್ಕೆ ಎಷ್ಟು ಹಣ ಮಂಜೂರಾಗಿದೆ? ಅದು ಎಷ್ಟು ದಿನಗಳಲ್ಲಿ ಮುಗಿಯಬೇಕು ಎಂಬುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಕಾಮಗಾರಿ ಪ್ರಾರಂಭಕ್ಕೆ

ಮುಂಚೆ ಈ ಎಲ್ಲ ವಿವರಗಳನ್ನು ಒಳಗೊಂಡ

ಫಲಕವನ್ನು ಕಾಮಗಾರಿ ಪ್ರಾರಂಭಕ್ಕೆ ಮೊದಲೆ

ಹಾಕಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದ

ಗುತ್ತಿಗೆದಾರನಿಗೆ ಅದ್ಹೇಗೆ ಕೆಲಸ ನೀಡಿದಿರಿ?

ಇದಕ್ಕೆ ಸಂಬಂಧಿಸಿದ ಅಧಿಕಾರಿ ಯಾರು?

ಅವರನ್ನು ಕರೆಸಿ ಎಂದು ಪ್ರಶ್ನಿಸಿದರು.

ಸಂತೋಷ ಮಣ್ಣೊಡ್ಡರ ಮಾತನಾಡಿ ಈ ಕಾಮಗಾರಿ ಈ ವರ್ಷ ಮುಗಿಯುವ ಹಾಗೆ ಕಾಣುತ್ತಿಲ್ಲ. ನಿಮಗೆ ಇನ್ನೂ ಒಂದು ವಾರ ಗಡುವು ಕೊಡುತ್ತೇವೆ. ಅಷ್ಟರೊಳಗೆ ಕಾಮಗಾರಿ ಪ್ರಾರಂಭವಾಗಬೇಕು. ಇಲ್ಲವಾದರೆ ಪಟ್ಟಣ

ಪಂಚಾಯತಿ ಮುಂದೆ ಅನಿರ್ದಿಷ್ಟ ಸತ್ಯಾಗ್ರಹ

ಹೂಡುತ್ತೇವೆ ಎಂದರು.

ಪ್ರತಿಭಟನೆಗೆ ನೆರೆದ ಜನರು ಎಲ್ಲರೂ ಒಟ್ಟಾಗಿ ಮಾತನಾಡಿ ಒತ್ತಡ ಹೇರುತ್ತಿದ್ದುದರಿಂದ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ.

ಪ.ಪಂ.ಎಂಜಿನೀಯರಿಂಗ್ ಕಾಟೇವಾಲೆ ಮಾತನಾಡಿ ನಮಗೂ ಸಹ ಈ ಕಾರ್ಯ ತಲೆ ನೋವಾಗಿದೆ. ಬೇಗನೆ ಮುಗಿದು ಸಾರ್ವಜನಿಕರಿಗೆ ಅನುಕೂಲವಾದರೆ ನಮಗೂ ಸಂಸತವಾಗುತ್ತದೆ. ಆದ್ದರಿಂದ ಸಂಬಂಧಿಸಿ ರವರಿಗೆ ನಾವು ಒತ್ತಾಯಿಸಿ

ಬೇಗನೆ ಕಾಮಗಾರಿ ಮುಕ್ತಾಯ ಮಾಡುವಂತೆ

ಆಗ್ರಹಿಸುತ್ತೇವೆ ಎಂದರು.

ಪ್ರತಿಭಟನಾಕಾರರು ನೀಡಿದ ಮನವಿಯನ್ನು ಪ,ಪಂ,ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಅಲ್ಲಾಬಕ್ಷಿ ನದಾಫ್, ಮಹೇಶ ಶಿವಶಿಂಪರ, ಕರವೇ ಅಧ್ಯಕ್ಷ ನಿಂಗಪ್ಪ ಹೊನ್ನಾಪೂರ, ಶಿವಾನಂದ ಇಟಗಿ, ನವೀನ ಗುರುವಡೆಯರ, ರವಿಗೊಲ್ಲರ, ರಾಮು ನಿರಂಜನ, ವೀರೇಶ ಬಿನ್ನಾಳ, ನಾಗರಾಜ ಜಿರ್ಲ, ಗಂಗಾಧರ ಮಡಿವಾಳರ, ಶಿವು ಹೂಗಾರ, ಪವನ ಕಟ್ಟಿಮನಿ, ವೀರಯ್ಯ ಸೌಸಿಮಠ, ಮುತ್ತು ದಿಂಡೂರ, ಪ್ರತೀಕ್,

ಮಹಾಂತೇಶ ಗುರುವಡೆಯರ, ವಿನೋದ ರಾಯಬಾಗಿ ಇನ್ನೂ ಮುಂತಾದವರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande