ಕಲಬುರಗಿ, 13 ಜೂನ್ (ಹಿ.ಸ.):
ಆ್ಯಂಕರ್:
ನನ್ನನ್ನು ವಿಧಾನ ಪರಿಷತ್ ಗೆ ನೇಮಕ ಮಾಡುವಂತೆ ಕೊರಿ ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಭೇಟಿಯಾಗುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ನಾಯಕ, ಜನರ ಸಲುವಾಗಿ ಹುಟ್ಟಿ ಬಂದಿರುವೆ ಜನರ ಸಲುವಾಗಿಯೇ ಸಾಯುತ್ತೇನೆ ನನಗೆ ಯಾವುದೇ ಆಸೆಗಳಿಲ್ಲ.ಜನರ ಸೇವೆ ಮಾಡುವುದೆ ನನ್ನ ಗುರಿಯಾಗಿದೆ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಬಿಟ್ಟು ಕಾಂಗ್ರೇಸ್ ಬಂದಿದ್ದೆ.ಇದೀಗ ಮಲ್ಲಿಕಾರ್ಜುನ ಖರ್ಗೆಯವರಿಗೆ ಭೇಟಿ ಮಾಡುತ್ತೆನೆ. ಒಟ್ಟು 8 ಸೀಟು ಎಮ್ ಎಲ್ ಸಿ ಸ್ಥಾನಗಳು ಖಾಲಿ ಇವೆ. ಹೀಗಾಗಿ ನನಗೂ ಒಂದು ಸ್ಥಾನ ನೀಡಿ ಅಂತಾ ಕೇಳುವೆ. ನಾಳೆ ಅಥವಾ ನಾಡಿದ್ದು ಮಲ್ಲಿಕಾರ್ಜುನ ಖರ್ಗೆಯವರಿಗೆ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸುವೇ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Samarth biral