ಮಾವು ಮಾರಾಟಕ್ಕೆ ನಿರ್ಬಂಧ : ಆಂಧ್ರ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, 12 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯದ ತೋತಾಪುರಿ ಮಾವಿನ ಹಣ್ಣಿಗೆ ಆಂಧ್ರ ಪ್ರದೇಶದಲ್ಲಿ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ರಾಜ್ಯದ ಮಾವು ಬೆಳೆಗಾರರು ಭಾರಿ ನಷ್ಟವಾಗುವ ಆತಂಕದಲ್ಲಿದ್ದು, ಕಳೆದ ಎರಡು ದಿನಗಳಿಂದ ಮಾವು ಬೆಳೆಗಾರರು ಪ್ರತಿಭಟನೆ ನಡೆಸಿದ್ದಾರೆ. ಕೋಲಾರದ ಶ್ರೀನಿ
Cm letter


ಬೆಂಗಳೂರು, 12 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯದ ತೋತಾಪುರಿ ಮಾವಿನ ಹಣ್ಣಿಗೆ ಆಂಧ್ರ ಪ್ರದೇಶದಲ್ಲಿ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ರಾಜ್ಯದ ಮಾವು ಬೆಳೆಗಾರರು ಭಾರಿ ನಷ್ಟವಾಗುವ ಆತಂಕದಲ್ಲಿದ್ದು, ಕಳೆದ ಎರಡು ದಿನಗಳಿಂದ ಮಾವು ಬೆಳೆಗಾರರು ಪ್ರತಿಭಟನೆ ನಡೆಸಿದ್ದಾರೆ.

ಕೋಲಾರದ ಶ್ರೀನಿವಾಸಪುರ ಮಾವಿನ ಹಣ್ಣಿಗೆ ಆಂಧ್ರದಲ್ಲಿ ಮಾರಾಟಕ್ಕೆ ನಿರ್ಬಂಧ ಹಾಕಿದ ಹಿನ್ನೆಲೆಯಲ್ಲಿ ರೈತರು ಮಾವುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಬಂಧವನ್ನು ವಾಪಸ್ ತೆಗೆಯುವಂತೆ ಮನವಿ ಮಾಡಿ ಆಂಧ್ರ ಪ್ರದೇಶ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಇತ್ತೀಚಿಗೆ ದೂರವಾಣಿ ಮೂಲಕ ಆಂಧ್ರ ಪ್ರದೇಶದ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿದ್ದರು.

ಶ್ರೀನಿವಾಸಪುರದ ತೋತಾಪುರಿ ಮಾವು ಖರೀದಿ ಮಾಡದಂತೆ ಚಿತ್ತೂರು ಜಿಲ್ಲಾಡಳಿತ ಮೌಖಿಕ ನಿರ್ಬಂಧ ಹೇರಿತ್ತು.

ಇದರ ಬೆನ್ನಲ್ಲೇ ಮಾವು ಬೆಲೆ ಕುಸಿತ ಉಂಟಾಗಿ ಮಾವು ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಇದೀಗ ಮಾವು ಮಾರಾಟ ಸಂಬಂಧ ಯಾವುದೇ ನಿರ್ಬಂಧ ಹೇರದಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande