ಮಹಾನ್ ನಾಯಕರ ಹಾದಿಯಲ್ಲಿ ಸಾಗೋಣ- ಎನ್ಎಸ್ ಬೋಸರಾಜು
ರಾಯಚೂರು, 10 ಜೂನ್ (ಹಿ.ಸ.) : ಆ್ಯಂಕರ್ : ಬುದ್ಧ-ಬಸವ-ಅಂಬೇಡ್ಕರ್‌ ಅವರು ಜಾಗತಿಕ ಮಟ್ಟದ ಮಹಾನ್ ದಾರ್ಶನಿಕ ನಾಯಕರು. ‘ಸಮಾಜದ ಶಾಂತಿ ಪ್ರಿಯರಾಗಿ ಬುದ್ಧ, ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಕಾಯಕವೇ ಕೈಲಾಸವೆಂದರು, ಡಾ.ಅಂಬೇಡ್ಕರ್ ಸಂವಿಧಾನ ನೀಡಿ ದೇಶದಲ್ಲಿ ಸಮಾನತೆ ತಂದು ಜನರ ಆರ್ಥಿಕ, ಸಾಮಾಜಿಕ, ಶ
ಈ ಮಹಾನ್ ನಾಯಕರ ಹಾದಿಯಲ್ಲಿ ಸಾಗೋಣ- ಎನ್ಎಸ್ ಬೋಸರಾಜು


ಈ ಮಹಾನ್ ನಾಯಕರ ಹಾದಿಯಲ್ಲಿ ಸಾಗೋಣ- ಎನ್ಎಸ್ ಬೋಸರಾಜು


ರಾಯಚೂರು, 10 ಜೂನ್ (ಹಿ.ಸ.) :

ಆ್ಯಂಕರ್ : ಬುದ್ಧ-ಬಸವ-ಅಂಬೇಡ್ಕರ್‌ ಅವರು ಜಾಗತಿಕ ಮಟ್ಟದ ಮಹಾನ್ ದಾರ್ಶನಿಕ ನಾಯಕರು. ‘ಸಮಾಜದ ಶಾಂತಿ ಪ್ರಿಯರಾಗಿ ಬುದ್ಧ, ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಕಾಯಕವೇ ಕೈಲಾಸವೆಂದರು, ಡಾ.ಅಂಬೇಡ್ಕರ್ ಸಂವಿಧಾನ ನೀಡಿ ದೇಶದಲ್ಲಿ ಸಮಾನತೆ ತಂದು ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬಲವರ್ಧನೆಗಾಗಿ ಶ್ರಮಿಸಿದ್ದಾರೆ ಎಂದು ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದ್ದಾರೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ, ಡಾ. ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿ ಸಂಘ ರಾಯಚೂರು ಸಂಯುಕ್ತಾಶ್ರಯದಲ್ಲಿ ಕೃಷಿ ವಿಶ್ವವಿದ್ಯಾಲಯದ ಜಗಜ್ಯೋತಿ ಶ್ರೀ ಬಸವೇಶ್ವರ ಸಭಾಂಗಣದಲ್ಲಿ ಆಯೋಜಿಸಿದ್ದ ಬುದ್ಧ ಬಸವಣ್ಣ ಅಂಬೇಡ್ಕರ್ ಜಯಂತಿಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಮಹಾನ್ ನಾಯಕರುಗಳ ಸಿದ್ಧಾಂತಗಳ ಮೇಲೆ ನಡೆಯುತ್ತ ಸಾಗಿದಾಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ’ ಇದರಿಂದ ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ನೆಲೆಸಲಿದೆ. ಬಸವಣ್ಣ ಅವರು ಕೈಲಾಸ ಮುಕ್ತಿಗೆ ಕಾಯಕ ಎಂದು ಎಲ್ಲರೂ ಕಾಯಕದಲ್ಲಿ ಕೈಲಾಸ ಕಾಣಿರಿ ಎಂದು ತಿಳಿಸಿದ್ದಾರೆ. ಅಂಬೇಡ್ಕರ್ ಕೊಟ್ಟ ಶಿಕ್ಷಣದಿಂದ ಅರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ತಿಳಿಸಿದರು.

ನಂತರ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ಶೋಷಿತ ಸಮುದಾಗಳನ್ನು ಮೇಲೆತ್ತಿದವರು. ಮನುಷ್ಯರನ್ನು ಮನುಷ್ಯರಂತೆ ಕಾಣದ ಈ ದೇಶದಲ್ಲಿ ಸಮಾನತೆ, ಸೌಹಾರ್ಧತೆಗೆ ಸಂದೇಶ ಸಾರಿದ ಮಹಾನ್ ಪುರುಷರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರವಚನಕಾರರಾಗಿ ಆಗಮಿಸಿದ್ದ ಪಂಡಿತಾರಾದ್ ಶಿವಾಚಾರ್ಯ ಮಹಾಸ್ವಾಮಿಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಹನುಮಂತಪ್ಪ, ಡಾ ರಮೇಶ, ವಿವಿಯ ಆಡಳಿತ ಅಧಿಕಾರಿಯಾಗಿ ಜಾಗೃತಿ ದೇಶಮನೆ, ಕೃಷಿ ವಿವಿಯ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾರ್ಜುನ್ ಪಡದಳ್ಳಿ, ಮಲ್ಲೇಶ ಕೊಲಮಿ, ಶರಣಬಸವ ಪಾಟೀಲ್, ನಾರಾಯಣ ರಾವ್ ದುರ್ಗೇಶ್ ಕೆಆರ್, ಡಾ ಅಮರೇಗೌಡ, ಶಿವಶಂಕರ ಎಂ, ಗುರುರಾಜ್ ಸುಂಕದ್, ಎಂ ಎಸ್ ಅಯ್ಯನಗೌಡರ್, ರವಿ ಮೇಸ್ತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande