ಬಳ್ಳಾರಿ : `ಅಸ್ತ- 2ಕೆ25' ಮ್ಯಾನೇಜ್ಮೆಂಟ್ ಉತ್ಸವ
ಬಳ್ಳಾರಿ, 31 ಮೇ (ಹಿ.ಸ.) : ಆ್ಯಂಕರ್ : ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು `ಅಸ್ತ- 2ಕೆ25' ಮ್ಯಾನೇಜ್ಮೆಂಟ್ ಉತ್ಸವವನ್ನು ಶನಿವಾರ ಯಶಸ್ವಿಯಾಗಿ ನಡೆಸಿಸದ್ದಾರೆ. ಪ್ರಶಾಂತ್ ರಾಮದುರ್ಗ ಅವರು ಮುಖ್ಯ ಅತಿಥಿಗಳಾಗಿ,
ಬಳ್ಳಾರಿ :  `ಅಸ್ತ- 2ಕೆ25' ಮ್ಯಾನೇಜ್ಮೆಂಟ್ ಉತ್ಸವ


ಬಳ್ಳಾರಿ, 31 ಮೇ (ಹಿ.ಸ.) :

ಆ್ಯಂಕರ್ : ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು `ಅಸ್ತ- 2ಕೆ25' ಮ್ಯಾನೇಜ್ಮೆಂಟ್ ಉತ್ಸವವನ್ನು ಶನಿವಾರ ಯಶಸ್ವಿಯಾಗಿ ನಡೆಸಿಸದ್ದಾರೆ.

ಪ್ರಶಾಂತ್ ರಾಮದುರ್ಗ ಅವರು ಮುಖ್ಯ ಅತಿಥಿಗಳಾಗಿ, ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ತರಗತಿಗಳಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ತರಗತಿಗಳ ಹೊರಗಡೆ, ಸ್ಪರ್ಧಾತ್ಮಕ ವೇದಿಕೆಗಳು ಮತ್ತು ಕೌಶಲ್ಯ - ಕ್ರಿಯಾಶೀಲತೆಯ ಪ್ರದರ್ಶನದ ವೇದಿಕೆಗಳಲ್ಲಿ ಹೆಚ್ಚಿನ ನೈಪುಣ್ಯತೆಯನ್ನು ಸಾಧಿಸುತ್ತಾರೆ ಎಂದರು.

ಕರ್ನಾಟಕ ಸೇರಿ ಆಂಧ್ರಪ್ರದೇಶದ 20 ಕಾಲೇಜುಗಳ ವಿದ್ಯಾರ್ಥಿಗಳು `ಅಸ್ತ- 2ಕೆ25' ಮ್ಯಾನೇಜ್ಮೆಂಟ್ ಉತ್ಸವದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯೂ ಈ ಉತ್ಸವದಲ್ಲಿ ನಡೆಯಿತು.

ಓ.ಎಸ್.ಪಿ ಲೀಡ್ - ಎನ್. ಕಾರ್ತಿಕ್, ಗಣ್ಯರು - ಹಳೆಯ ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಆರ್‍ವೈಎಂಇ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ, ಉಪ ಪ್ರಾಂಶುಪಾಲೆ ಡಾ. ಸವಿತಾ ಸೋನೋಳಿ ಹಾಗೂ ಗಣ್ಯರು ವೇದಿಕೆಯಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande