ನವದೆಹಲಿ, 30 ಮೇ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ‘ಜೈ ಹಿಂದ್ ಯಾತ್ರೆ’ಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಸಂಸದ ಸಂಬಿತ್ ಪಾತ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ರಾಹುಲ್ ಗಾಂಧಿ ಎಷ್ಟು ಪಾಕಿಸ್ತಾನಿ ವಾಯು ನೆಲೆಗಳನ್ನು ನಾಶಪಡಿಸಲಾಗಿದೆ ಎಂದು ಕೇಳಲಿಲ್ಲ, ಬದಲಿಗೆ ಎಷ್ಟು ಭಾರತೀಯ ರಫೇಲ್ ವಿಮಾನಗಳು ಹೊಡೆದುರುಳಿಸಲಾಗಿದೆ ಎಂದು ಮಾತ್ರ ಕೇಳುತ್ತಿದ್ದಾರೆ. ಇದು ನೈಜ ದೇಶಭಕ್ತನ ಧ್ವನಿ ಅಲ್ಲ,” ಎಂದು ಹೇಳಿದರು.
“ಪಾಕಿಸ್ತಾನದ ಬಬ್ಬರ್ ಎಂಬಂತೆ ಮಾತನಾಡುತ್ತಿರುವ ರಾಹುಲ್, ಭಾರತದ ಗಬ್ಬರ್ ವಿರುದ್ಧ ಪ್ರಶ್ನೆ ಕೇಳುತ್ತಿದ್ದಾರೆ.
“ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿವೆ – ಒಂದು ಪಾಕಿಸ್ತಾನ ಪರ, ಇನ್ನೊಂದು ದೇಶ ಪರ. ಆದರೆ ದೇಶದ ಪರ ಇರುವವರ ಧ್ವನಿ ಅಡಗಿಸಲಾಗಿದೆ ಎಂದಿದ್ದಾರೆ.
ಜೈ ಹಿಂದ್ ಯಾತ್ರೆ, ಪಾಕಿಸ್ತಾನದ ಹಿಂದ್ ಯಾತ್ರೆಯಂತೆ ಕಾಣುತ್ತಿದೆ. ಇದನ್ನು ನಿಲ್ಲಿಸಿ ಪಾಕಿಸ್ತಾನ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸೋದು ನಿಮಗೆ ಉತ್ತಮ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa