ಲಿಖಿಂಪುರ್, 31 ಮೇ (ಹಿ.ಸ.) :
ಆ್ಯಂಕರ್ : ಅಸ್ಸಾಂನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 37 ಹಾಗೂ 17 ಮೇಲೆ ನೀರು ಹರಿಯತೊಡಗಿದೆ. ಬೊಕಾಖಾಟ್ನ ಲತಾಬರಿ ಬಳಿ ಹೆದ್ದಾರಿಯ ಮೇಲೆ ನೀರು ತೀವ್ರವಾಗಿ ಹರಿಯುತ್ತಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಲಖಿಂಪುರ ಜಿಲ್ಲೆಯಲ್ಲಿ ರಂಗನದಿಯ ಪ್ರವಾಹ ಅನೇಕ ಹಳ್ಳಿಗಳಿಗೆ ನುಗ್ಗಿದ್ದು, 30ಕ್ಕೂ ಹೆಚ್ಚು ಗ್ರಾಮಗಳು ನೆರೆಹಾನಿಗೆ ಒಳಗಾಗಿವೆ. ನಿಪ್ಕೊ ಅಣೆಕಟ್ಟಿನಿಂದ ಪೂರ್ವ ಸೂಚನೆ ಇಲ್ಲದೇ ನೀರು ಬಿಡಲಾಗಿದೆ ಎಂಬುದರಿಂದ ಜನರಲ್ಲಿ ಅಸಮಾಧಾನವಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಕುಸಿದು ಮರಗಳು ನೆಲಕ್ಕುರುಳಿವೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ 37 ಮುಚ್ಚುವ ಸಾಧ್ಯತೆ ಕೂಡ ಉಂಟಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa