ಸತ್ಯದ ಹಾದಿಯಲ್ಲಿ ನಡೆಯಲು ನೆಹರು ಪ್ರೇರಣೆ : ರಾಹುಲ್ ಗಾಂಧಿ
ನವದೆಹಲಿ, 19 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜವಾಹರಲಾಲ್ ನೆಹರೂ ನಮಗೆ ರಾಜಕೀಯ ತಂತ್ರಗಳನ್ನು ಕಲಿಸಿದ ವ್ಯಕ್ತಿಯಲ್ಲ. ಅವರು ನಮ್ಮೊಳಗಿನ ಭಯವನ್ನು ತೊಡೆದುಹಾಕಿ, ಸತ್ಯದ ಹಾದಿಯಲ್ಲಿ ಧೈರ್ಯವಾಗಿ ನಡೆಯಲು ಪ್ರೇರಣೆಯಾದರು,” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ತಮ್ಮ ಸಾಮಾಜಿಕ ಜಾ
Rahul


ನವದೆಹಲಿ, 19 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜವಾಹರಲಾಲ್ ನೆಹರೂ ನಮಗೆ ರಾಜಕೀಯ ತಂತ್ರಗಳನ್ನು ಕಲಿಸಿದ ವ್ಯಕ್ತಿಯಲ್ಲ. ಅವರು ನಮ್ಮೊಳಗಿನ ಭಯವನ್ನು ತೊಡೆದುಹಾಕಿ, ಸತ್ಯದ ಹಾದಿಯಲ್ಲಿ ಧೈರ್ಯವಾಗಿ ನಡೆಯಲು ಪ್ರೇರಣೆಯಾದರು,” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅವರು ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಈ ಮೂಲಕ ನೆಹರೂ ಪರಂಪರೆಯ ಮಹತ್ವವನ್ನು ಉಲ್ಲೇಖಿಸಿ, “ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಅವರು ಜನತೆಗೆ ದಬ್ಬಾಳಿಕೆಯನ್ನು ಎದುರಿಸುವ ಶಕ್ತಿಯನ್ನು ತುಂಬಿದರು. ಅವರ ಶ್ರೇಷ್ಠವಾದ ಪರಂಪರೆ ಸತ್ಯದ ನಿರಂತರ ಅನ್ವೇಷಣೆಯಲ್ಲಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.“ಅವರ ತತ್ತ್ವಗಳು ಹಾಗೂ ಚಿಂತನೆಗಳು ಈ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ,” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande