
ಕುಡತಿನಿ, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕುಡತಿನಿ ಸುತ್ತಲಿನ ಭೂ ಸಂತ್ರಸ್ತರು ಭೂಮಿಯನ್ನು ತುಂಡು ತುಂಡು ಮಾಡಿ ಬೇರೆ ಬೇರೆ ಕಂಪನಿಗಳಿಗೆ ರಿಯಲ್ ಎಸ್ಟೇಟ್ ರೀತಿಯಲ್ಲಿ ಮಾರಾಟ ಮಾಡುತ್ತಿರುವ ಕೆಐಎಡಿಬಿಯ ನೀತಿಯನ್ನು ವಿರೋಧಿಸಿ ಏಳು ಗ್ರಾಮಗಳ ಭೂ ಸಂತ್ರಸ್ತರು ಮತ್ತು ಸಂಘಟನೆಗಳ ಸದಸ್ಯರು ಜನವರಿ 12ರ ಸೋಮವಾರ ಬೆಳಗ್ಗೆ ಕುಡತಿನಿಯಿಂದ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಹಾಗೂ ಭೂ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷರಾಗಿರುವ ಯು. ಬಸವರಾಜ್ ಅವರು, ಕುಡತಿನಿ, ಹರಗಿನಡೋಣಿ, ಜಾನೇಕುಂಟೆ, ವೇಣಿವೀರಾಪುರ, ಕೊಳಗಲ್ಲು, ಯರಂಗಳಿ, ಸಿದ್ದಮ್ಮನಹಳ್ಳಿ ಗ್ರಾಮಗಳ 12,000 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಬೃಹತ್ ಕೈಗಾರಿಕೆಗಳಿಗೆ ನೀಡಿದೆ. ಆದರೆ, ಈ ಭೂಮಿಯನ್ನು ಚಿಕ್ಕ ಚಿಕ್ಕ ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸಲು ಮಾರಾಟ ಮಾಡುತ್ತಿದೆ. ಇದು ವ್ಯವಸ್ಥೆಯ ವಿರೋಧಿ ಎಂದರು.
ಜಿಂದಾಲ್ನ ಜೆಎಫ್ಇ ಸ್ಟೀಲ್ ಎಲೆಕ್ಟ್ರಿಕಲ್ ಕೈಗಾರಿಕೆಗೆ ಸ್ಥಾಪನೆಗೆ ಸರ್ಕಾರ ಭೂಮಿ ನೀಡಿದೆ. ಮಿತ್ತಲ್, ಬ್ರಹ್ಮಿಣಿ ಸೇರಿ ಕೈಗಾರಿಕೆಗಳಿಗೆ ಭೂಮಿ ನೀಡಿರುವ ಕೆಐಎಡಿಬಿಯು ಈಗ ಅದೇ ಭೂಮಿಯನ್ನು ತುಂಡು ತುಂಡಾಗಿ ಕಂಪನಿಗಳಿಗೆ ನೀಡುತ್ತಿದೆ. ಈಗ, ಜಿಂದಾಲ್ನ ಜೆಎಫ್ಇ ಘಟಕ ಪ್ರಾರಂಭಕ್ಕೆ ಪರವಾನಿಗೆ ನೀಡಿದೆ ಎಂದರು.
ಕೆಐಎಡಿಬಿಯ ಈ ಕ್ರಮವನ್ನು ವಿರೋಧಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಯಲ್ಲಿ ಭೂ ಸಂತ್ರಸ್ತರು, ಕೃಷಿ ಕಾರ್ಮಿಕರು ಮತ್ತು ಮಹಿಳೆಯರು ಹಾಗೂ ಸಂಘಟನೆಗಳವರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್