ಗಂಗಾವತಿಯಲ್ಲಿ ಮಹಿಳೆಯರಿಂದ `ಅಕ್ಕಮಹಾದೇವಿ’ ನಾಟಕ ಪ್ರದರ್ಶನ
ಗಂಗಾವತಿ, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಇತ್ತೀಚಿನ ದಿನಗಳಲ್ಲಿ ರಂಗಭೂಮಿಗೆ ಪೆÇ್ತ್ರೀತ್ಸಾಹ ಕೊರತೆಯಾಗಿದೆ ಎಂದು ಕರ್ನಾಟಕ ನಾಟಕ ಆಕಾಡೆಮಿ ಮಾಜಿ ಅದ್ಯಕ್ಷೆ ಮಾಲತಿ ಸುಧೀರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಶ್ರೀ ಚೆನ್ನಬಸವಸ್ವಾಮಿ ಕಲಾ ಮಂದರಿದಲ್ಲಿ ಶ್ರೀ ಮಹಾಲಕ್ಷ್ಮೀ ಕಲಾ ಸ
ಗಂಗಾವತಿಯಲ್ಲಿ ಮಹಿಳೆಯರಿಂದ `ಅಕ್ಕಮಹಾದೇವಿ’ ನಾಟಕ ಪ್ರದರ್ಶನ


ಗಂಗಾವತಿ, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಇತ್ತೀಚಿನ ದಿನಗಳಲ್ಲಿ ರಂಗಭೂಮಿಗೆ ಪೆÇ್ತ್ರೀತ್ಸಾಹ ಕೊರತೆಯಾಗಿದೆ ಎಂದು ಕರ್ನಾಟಕ ನಾಟಕ ಆಕಾಡೆಮಿ ಮಾಜಿ ಅದ್ಯಕ್ಷೆ ಮಾಲತಿ ಸುಧೀರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಶ್ರೀ ಚೆನ್ನಬಸವಸ್ವಾಮಿ ಕಲಾ ಮಂದರಿದಲ್ಲಿ ಶ್ರೀ ಮಹಾಲಕ್ಷ್ಮೀ ಕಲಾ ಸಂಘ ಏರ್ಪಡಿಸಿದ್ದ ಅಕ್ಕಮಾದೇವಿ ಮತ್ತು ಸಿರಿಗೇರಿಯ ಧಾತ್ರಿ ಸಂಸ್ಥೆಯ ಸಂಸಾರದಲ್ಲಿ ಸನಿದಪ ನಾಟಕವನ್ನು ಉದ್ಘಾಟಿಸಿ ಅವರು ಮತನಾಡಿದರು.

ಮೂರು ನಾಲ್ಕು ದಶಕಗಳ ಹಿಂದೆ ಈ ಭಾಗದಲ್ಲಿ ನಾಟಕಗಳನ್ನು ಪ್ರದರ್ಶಿಸುವಾಗ ಸಾಕಷ್ಟು ಕಲಾಭಿಮಾನಿಗಳು ಆಗಮಿಸಿ ಪೆÇ್ರೀತ್ರಾಹಿಸುತ್ತಿದ್ದರು. ಮೊಬೈಲ್ ಮತ್ತು ಟಿವಿಗಳ ಹಾವಳಿಯಿಂದ ರಂಗಭೂಮಿಗೆ ಧಕ್ಕೆ ಉಂಟಾಗಿದೆ. ಕಷ್ಟ ಕಾಲದಲ್ಲಿ ಗಂಗಾವತಿಯಲ್ಲಿ ನಾಟಕ ಕಂಪನಿ ಹಾಕಿದ್ದ ಸಂದರ್ಭದಲ್ಲಿ ಪುಣ್ಯಸ್ಥಳ ಕೈಹಿಡಿದು ಪೆÇ್ರೀತ್ಸಾಹಿಸಿದೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು, ಗಂಗಾವತಿ ನಗರ ಕಲೆ ಸಂಸ್ಕೃತಿಯ ತವರೂರು. ಗಂಗಾವತಿಯಲ್ಲಿ ಪ್ರದರ್ಶನಗೊಳ್ಳುವ ನಾಟಕ ಸೇರಿ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ. ಮಹಿಳೆಯರು ನಾಟಕ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

ನಂದಿಪುರ ಡಾ. ಮಹೇಶ್ವರ ಸ್ವಾಮೀಜಿ ಅವರು ಕಾಯ್ಕ್ರಮದ ಸಾನಿಧ್ಯವನ್ನು ವಹಿಸಿದ್ದರು. ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ ಕೇಸರಹಟ್ಟಿ ಅವರು, ಮಹಿಳೆಯರೇ ನಾಟಕ ಪ್ರದರ್ಶನ ಮಾಡುತ್ತಿದ್ದು, ಗಣ್ಯರು ಸಹಕಾರ ನೀಡಿದ್ದಾರೆ ಎಂದರು.

ನಾಟಕಕಾರ ಎಸ್.ವಿ. ಪಾಟೀಲ್ ಗುಂಡೂರು, ರೇವಣಸಿದ್ದಯ್ಯ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಶಂಕರಗೌಡ ಹೊಸಳ್ಳಿ, ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್, ಸರೋಜ ಮಲ್ಲಿಕಾರ್ಜುನ ನಾಗಪ್ಪ, ಜ್ಯೋತಿ ಜಾಜಪ್ಪ ನ್ಯಾಮಗೌಡರ್, ಅನ್ನಪೂರ್ಣಸಿಂಗ್, ಶೈಲಜಾ ಹಿರೇಮಠ, ಸುನೀತಾ ಶ್ಯಾವಿ, ಗೀತಾ ವಿಕ್ರಂ, ಶಿವಪ್ಪಗಾಳಿ, ಪತ್ರಕರ್ತರಾದ ಎಸ್.ಎಂ. ಪಟೇಲ್, ರಾಮಮೂರ್ತಿ ನವಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹಾಗು ಹಿರಿಯ ರಂಗಕರ್ಮಿ ನಾಗರಾಜ ಇಂಗಳಗಿ, ಪ್ರಸನ್ನ ದೇಸಾಯಿ, ಕೃಷ್ಣ ವೀರಾಪುರ, ಗಿರಿಧರ ಜೂರಟಗಿ, ರಾಘವೇಂದ್ರ ದಂಡಿನ್, ಮಲ್ಕೇಶಿ ಕೋಟಿ, ಮಹಿಪತಿ ಕನಕಗಿರಿ, ಶ್ರವಣಕುಮಾರ ರಾಯ್ಕರ್ ಸೇರಿ ಅನೇಕರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande