

ಬೆಂಗಳೂರು, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಐ ಐ ಹೆಚ್ ಆರ್ ನ ನಿರ್ದೇಶಕರಾದ ಡಾಕ್ಟರ್ ತುಷಾರ್ ಕಾಂತಿ ಬೆಹರಾ ರವರು ತರಕಾರಿ ಬೆಳೆಗಳ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ಇದೇ ಅಕ್ಟೋಬರ್ 31 ರಿಂದ ನವೆಂಬರ್ 2ರವರೆಗೆ ತಳಿ ವಿಜ್ಞಾನ ಮತ್ತು ಸಸ್ಯಾಬಿರುದ್ದಿ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ 'ಹವಾಮಾನ ಸಹಿಷ್ಣು ಬೆಳೆ ಅಭಿವೃದ್ಧಿ , ತಳಿಶಾಸ್ತ್ರ,
ಜಿನೋ ಮಿಕ್ಸ್, ಮತ್ತು ತಳಿ ಅಭಿವೃದ್ಧಿ ಯಲ್ಲಿನ ಇತ್ತೀಚಿನ ಬೆಳವಣಿಗೆಗಳು' ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ಡಾಕ್ಟರ್ ಬೆಹೆರಾ ಅವರಿಗೆ ನೀಡಿ ಗೌರವಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ