
ವಿಜಯಪುರ, 22 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಭೂಕಂಪನ ರಿಕ್ಟರ್ ಮಾಪನದಲ್ಲಿ 2.9 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಮಾಹಿತಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ, ಯರನಾಳ, ಹತ್ತರಕಿಹಾಳ, ನಂದ್ಯಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಕಂಪನ ಆಗಿದೆ.
ಭೂಮಿಯಾಳದ 2.5 ಕಿಲೋ ಮೀಟರ್ ನಲ್ಲಿ ನಡುಗಿದ ಭೂಮಿಯಿಂದ ಮನಗೂಳಿ ಪಟ್ಟಣದಲ್ಲಿ ಭೂಮಿಯಾಳದಿಂದ ಮೂರು ಬಾರಿ ಬಾರೀ ಶಬ್ದ ಕೇಳಿದೆ. ಇದರಿಂದ ಜನತೆ ಮನೆಯಾಚೆ ಓಡಿ ಬಂದಿದ್ದಾರೆ. ದೀಪಾವಳಿ ಪಾಡ್ಯದ ಖುಷಿಯಲ್ಲಿದ್ದ ಜನರಿಗೆ ಆತಂಕ ಎದುರಾಗಿದೆ. ಕಡಿಮೆ ತೀವ್ರತೆಯ ಕಂಪನ ಆಗಿದೆ. ಜನರು ಭಯಗೊಳ್ಳಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande