ಕ್ಯೂಬಾ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಆಹಾರ ಭದ್ರತೆ ಮತ್ತು ಪೋಷಕಾಂಶಗಳನ್ನು ಖಚಿತಪಡಿಸಿಕೊಳ್ಳಲು ಭಾರತ ವಿಶ್ವದ ಅತಿದೊಡ್ಡ ಆಹಾರ ಸುರಕ್ಷತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ರಾಮ್ನಾಥ್ ಠಾಕೂರ್ ಹೇಳಿದ್ದಾರೆ. ಅವರು ಬ್ರೆಜಿಲ್ನ ಕ್ಯೂಬಾದಲ್ಲಿ ನಡೆದ ಜಿ-೨೦ ಕೃಷಿ ಸಚಿವರ ಸಭೆ ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಿದೆ; ಭಾರತ ಉತ್ಪಾದನೆಯ ಮೇಲೆ ಮಾತ್ರವಲ್ಲದೆ, ಆರ್ಥಿಕ, ಸಾಮಾಜಿಕ, ಪರಿಸರ ಸುಸ್ಥಿರತೆ ಮತ್ತು ರೈತರ ಅಭ್ಯುದಯಕ್ಕೂ ಒತ್ತು ನೀಡಿ, ಸಮಗ್ರ ದೃಷ್ಟಿಕೋನದಿಂದ ಕಾರ್ಯಕ್ರಮವನ್ನು ಸಕಾರಗೊಳಿಸುತ್ತಿವೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್