ಕೊಪ್ಪಳ, 30 ಏಪ್ರಿಲ್ (ಹಿ.ಸ) :
ಆ್ಯಂಕರ್ : ನಗರದ ಕಿನ್ನಾಳ ರಸ್ತೆಯ ಭಾಗ್ಯನಗರ ಎನ್ಜಿಒ ಕಾಲೋನಿ ನಿವಾಸಿಯಾಗಿರುವ ಶ್ರೀಮತಿ ನೀಲಮ್ಮ ಶಿವನಗೌಡ ಪೊಲೀಸ್ಪಾಟೀಲ (50) ಏಪ್ರಿಲ್ 6ರಂದು ಮುಧೋಳ ತಾಲೂಕಿನ ಇಂಗಳಗಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಇದುವರೆಗೂ ವಾಪಸಾಗಿಲ್ಲ ಎಂದು ಪುತ್ರ ಬುಡ್ಡನಗೌಡ ಪೊಲೀಸ್ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಯಿ ನೀಲಮ್ಮನವರು ಇತ್ತೀಚೆಗೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ಕನ್ನಡ ಸ್ಪಷ್ಟವಾಗಿ ಮಾತನಾಡುತ್ತಾರೆ. ತಾಯಿಯವರು ಕಾಣೆಯಾದ ಕುರಿತು ಈಗಾಗಲೇ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹುಡುಕಲಾಗಿದ್ದು ಪತ್ತೆಯಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮನೆಯಿಂದ ಹೊರಡುವಾಗ ಗುಲಾಬಿ ಬಣ್ಣದ ಸೀರೆ, ತಿಳಿ ಹಸಿರು ಜಂಪರ್ ಧರಿಸಿದ್ದು ಇವರ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಕೂಡಲೇ ಬುಡ್ಡನಗೌಡ ಪೊಲೀಸ್ಪಾಟೀಲ (ಮೊಬೈಲ್: 7411142373) ಸಂಪರ್ಕಿಸಲು ಅವರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್