ಭಾರತದ ರೈತ ಸರಬ್ಜಿತ್ ಹತ್ಯೆ ಮಾಡಿದ್ದ ಭೂಗತ ಪಾತಕಿ ಅಮೀರ್ ಸರ್ಫರಾಜ್ ಹತ್ಯೆ!
ಲಾಹೋರ್, 15 ಏಪ್ರಿಲ್ (ಹಿ.ಸ):ಆ್ಯಂಕರ್:ಪಾಕ್ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಹತ್ಯೆ ಮಾಡಿದ್ದ ಭೂಗತ ಪಾ
ುಪಪ


ಲಾಹೋರ್, 15 ಏಪ್ರಿಲ್ (ಹಿ.ಸ):ಆ್ಯಂಕರ್:ಪಾಕ್ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಹತ್ಯೆ ಮಾಡಿದ್ದ ಭೂಗತ ಪಾತಕಿಯನ್ನ ಅಪರಿಚಿತ ದಾಳಿಕೋರರು ಹತ್ಯೆ ಮಾಡಿದ್ದಾರೆ.

ಅಪರಿಚತ ದಾಳಿಕೋರರಿಂದ ಅಮೀರ್ ಸರ್ಫರಾಜ್ ಹತ್ಯೆ!

ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ನನ್ನ ಹತ್ಯೆ ಮಾಡಿದ್ದ ಭೂಗತ ಪಾತಕಿ ಅಮೀರ್ ಸರ್ಫರಾಜ್ ಎಂಬಾತನನ್ನು ಅಪರಿಚಿತ ದಾಳಿಕೋರರು ಹತ್ಯೆ ಮಾಡಿದ್ದಾರೆ. ಸರಬ್ಜಿತ್ ಸಿಂಗ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಸರ್ಫರಾಜ್ ಹಾಗೂ ಗ್ಯಾಂಗ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದ್ರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2018ರಲ್ಲಿ ಪ್ರಕರಣದಲ್ಲಿ ಖುಲಾಸೆಗೊಂಡಿದ್ದರು. ಇದೀಗ ಅದೇ ಲಾಹೋರ್ ನಲ್ಲಿ ಅಪರಿಚಿತ ಬಂದೂಕುಧಾರಿಗಳು ಸರ್ಫರಾಜ್ನನ್ನು ಕೊಂದುಹಾಕಿದ್ದಾರೆ. ಹಾಗಿದ್ರೆ 2013ರಲ್ಲಿ ಹತ್ಯೆಯಾಗಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಹಿನ್ನೆಲೆ ಏನು ಅಂತ ನೋಡೋದಾದ್ರೆ..

ಸರಬ್ಜಿತ್ ಸಿಂಗ್ ಯಾರು?

ಸರಬ್ಜಿತ್ ಪಂಜಾಬ್ನ ಭಿಖಿವಿಂಡ್ ಗ್ರಾಮದ ರೈತ

1990 ಆ.30ರಂದು ಆಕಸ್ಮಿಕವಾಗಿ ಪಾಕ್ ಗೆ ಹೋಗಿದ್ದ

ಗೂಢಚಾರಿಕೆ ಆರೋಪದಲ್ಲಿ ಬಂಧಿಸಿದ್ದ ಪಾಕ್ ಸೇನೆ

ಸರಬ್ಜಿತ್ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕಿದ್ದ ಪಾಕ್

ಬಾಂಬ್ ಸ್ಫೋಟದಲ್ಲಿ ಸರಬ್ಜಿತ್ ಸಿಂಗ್ ಕೈವಾಡ ಆರೋಪ

ಸರಬ್ಜಿತ್ಗೆ ಮರಣದಂಡನೆ ವಿಧಿಸಿದ್ದ ಪಾಕಿಸ್ತಾನ ಕೋರ್ಟ್

ಭಾರತಕ್ಕೆ ಸರಬ್ಜಿತ್ ಕರೆತರುವ ಎಲ್ಲ ಪ್ರಯತ್ನ ವಿಫಲ ಆಗಿತ್ತು

ಸರಬ್ಜಿತ್ ಸಿಂಗ್ ಜೈಲಿನಲ್ಲಿದ್ದಾಗಲೇ ಮಾರಣಾಂತಿಕ ಹಲ್ಲೆ

ಸ್ವಲ್ಪ ದಿನಗಳ ಬಳಿಕ ಸಾವನ್ನಪ್ಪಿದ್ದ ಸರಬ್ಜಿತ್ ಸಿಂಗ್

ಸರಬ್ಜಿತ್ ಸಿಂಗ್ ದೇಹವನ್ನು ಭಾರತಕ್ಕೆ ಕಳುಹಿಸಿದ್ದ ಪಾಕ್

ಭಾರತಕ್ಕೆ ಮಾರಕವಾದ ಉಗ್ರರು, ಡಾನ್ಗಳು ವಿಶ್ವದ ವಿವಿಧೆಡೆ ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಮುಂದುವರಿದಿದೆ. ಸದ್ಯ ಆಮಿರ್ ಸರ್ಫರಾಜ್ ಹತ್ಯೆಯಾಗಿದ್ದು ಯಾರು ಈ ಕೃತ್ಯ ಎಸಗಿದ್ದು ಎಂಬುದು ಗೊತ್ತಾಗಿಲ್ಲ. ಇಬ್ಬರು ಅಪರಿಚಿತ ಬಂದೂಕುಧಾರಿಗಳು ಸರ್ಫರಾಜ್ನನ್ನು ಗುಂಡಿಟ್ಟು ಹತ್ಯೆಗೈದಿರುವುದು ವರದಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande