ಬೆಂಗಳೂರಲ್ಲಿ ಅಕ್ಟೋಬರ್ 21ರಿಂದ ಮತ್ತೆ ಮಳೆ, ಹಳದಿ ಮುನ್ನಚ್ಚರಿಕೆ
ಬೆಂಗಳೂರು, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಶುಭ್ರ ಆಕಾಶವಿದ್ದು, ಬಿಸಿಲಿದೆ. ಆದರೆ ಅಕ್ಟೋಬರ್ 21ರಿಂದ ಮಳೆ ಶುರುವಾಗಲಿದ್ದು, ಹಳದಿ ಮುನ್ನಚ್ಚರಿಕೆ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ,
Karnataka Rains: Orange alert for Bengaluru and other 12 d


ಬೆಂಗಳೂರು, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಶುಭ್ರ ಆಕಾಶವಿದ್ದು, ಬಿಸಿಲಿದೆ. ಆದರೆ ಅಕ್ಟೋಬರ್ 21ರಿಂದ ಮಳೆ ಶುರುವಾಗಲಿದ್ದು, ಹಳದಿ ಮುನ್ನಚ್ಚರಿಕೆ ಘೋಷಿಸಲಾಗಿದೆ.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಹಳದಿ ಮುನ್ನಚ್ಚರಿಕೆ​ ಘೋಷಿಸಲಾಗಿದೆ.

ದಾವಣಗೆರೆ, ಚಿತ್ರದುರ್ಗ, ಹಾವೇರಿ, ಕುಂದಾಪುರ, ಹಿರೇಕೆರೂರು, ಹುಣಸೂರು, ಶಿರಾಲಿ, ಕಿರವತ್ತಿ, ಶಿಗ್ಗಾಂವ್, ಮಂಕಿ, ಗೋಕರ್ಣ, ಶೋರಾಪುರ, ನರಗುಂದ, ನಾಯಕನಹಟ್ಟಿ, ಯಲ್ಲಾಪುರ, ನಂಜನಗೂಡು, ಕದ್ರಾ, ಮಂಕಿ, ಗಬ್ಬೂರು, ಬೈಲಹೊಂಗಲ, ಬಾದಾಮಿಯಲ್ಲಿ ಮಳೆಯಾಗಿದೆ.

ಬೆಳಗಾವಿ, ಅಂಕೋಲಾ, ಕಾರವಾರ, ಗೇರುಸೊಪ್ಪ, ಮುದಗಲ್, ಲೋಕಾಪುರ, ಭದ್ರಾವತಿ, ಕಡೂರು, ಕೋಟ, ಆಲಮಟ್ಟಿ, ಕುಮಟಾ, ಹಳಿಯಾಳ, ಧರ್ಮಸ್ಥಳ, ಮುದ್ದೇಬಿಹಾಳ, ರಾಯಚೂರು, ಸೇಡಂ, ಹೊನ್ನಾವರ, ಕುಷ್ಟಗಿ, ಖಜೂರಿ, ಧಾರವಾಡ, ಸೈದಾಪುರ, ಕುಂದಗೋಳ, ಚಿಕ್ಕೋಡಿ, ಗೋಕಾಕ್​ನಲ್ಲಿ ಮಳೆಯಾಗಿದೆ.

ಜೇವರ್ಗಿ, ಮಧುಗಿರಿ, ಲಿಂಗನಮಕ್ಕಿ, ಕುಡತಿನಿ, ಹೊಸದುರ್ಗ, ದೊಡ್ಡಬಳ್ಳಾಪುರ, ಚಿಕ್ಕಮಗಳೂರು, ಬೆಳ್ಳೂರು, ತ್ಯಾಗರ್ತಿಯಲ್ಲಿ ಮಳೆಯಾಗಿದೆ. ಕಾರವಾರದಲ್ಲಿ 31.08 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 16.8 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನಲ್ಲಿ ಶುಭ್ರ ಆಕಾಶವಿದೆ, ಎಚ್​ಎಎಲ್​ನಲ್ಲಿ22.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 22.1ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 24.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 24.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande