ಜೆಎಸ್ಡಬ್ಲ್ಯೂ ಫೌಂಡೇಶನ್ ಕ್ರೀಡಾಕೂಟ
ತೋರಣಗಲ್ಲು, 18 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಗಣೇಶ ಹಬ್ಬದ ಪ್ರಯುಕ್ತ ಜೆಎಸ್ಡಬ್ಲ್ಯೂ ಫೌಂಡೇಶನ್ ಸಹಯೋಗದೊಂದಿಗೆ ಶ್ರೀ ಬಾಲ ಗಜಾನನ ಯುವಕ ಸಂಘವು ಬನ್ನಿಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿತ್ತು. ಸೆಪ್ಟೆಂಬರ್ 14ರಿಂದ 16ರವರೆಗೆ ನಡೆದ ಕ್ರೀಡಾಕೂಟದಲ್ಲಿ ವಾಲಿ
ತೋರಣಗಲ್ಲು,  : ಜೆಎಸ್ಡಬ್ಲ್ಯೂ ಫೌಂಡೇಶನ್: ಕ್ರೀಡಾಕೂಟ


ತೋರಣಗಲ್ಲು,  : ಜೆಎಸ್ಡಬ್ಲ್ಯೂ ಫೌಂಡೇಶನ್: ಕ್ರೀಡಾಕೂಟ


ತೋರಣಗಲ್ಲು, 18 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಗಣೇಶ ಹಬ್ಬದ ಪ್ರಯುಕ್ತ ಜೆಎಸ್ಡಬ್ಲ್ಯೂ ಫೌಂಡೇಶನ್ ಸಹಯೋಗದೊಂದಿಗೆ ಶ್ರೀ ಬಾಲ ಗಜಾನನ ಯುವಕ ಸಂಘವು ಬನ್ನಿಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿತ್ತು. ಸೆಪ್ಟೆಂಬರ್ 14ರಿಂದ 16ರವರೆಗೆ ನಡೆದ ಕ್ರೀಡಾಕೂಟದಲ್ಲಿ ವಾಲಿಬಾಲ್, ಕ್ರಿಕೆಟ್, ಕಬಡ್ಡಿ ಮತ್ತು ಖೋ-ಖೋ ಸ್ಪರ್ಧೆಗಳು ನಡೆದವು.

ಬನ್ನಿಹಟ್ಟಿ, ನಾಗಲಾಪುರ ಹಾಗೂ ಗಂಗಲಾಪುರ ಗ್ರಾಮಗಳಿಂದ ಒಟ್ಟು 27 ತಂಡಗಳ 150 ಯುವ ಆಟಗಾರರು ಭಾಗವಹಿಸಿದ್ದರು. ಜೆಎಸ್ಡಬ್ಲ್ಯೂ ಫೌಂಡೇಶನ್ ವತಿಯಿಂದ ಟಿ-ಶರ್ಟ್ಗಳು, ಟ್ರೋಫಿಗಳು, ಕಪ್ಗಳು ಹಾಗೂ ಪದಕಗಳನ್ನು ಒದಗಿಸಲಾಯಿತು.

ವಾಲಿಬಾಲ್ನಲ್ಲಿ ಬನ್ನಿಹಟ್ಟಿಯ ಶ್ರೀ ಬಾಲ ಗಜಾನನ ಯುವಕ ಸಂಘ ಚಾಂಪಿಯನ್ ಹಾಗೂ ಜೆಜಿ ಬಾಯ್ಸ್ ಕ್ಲಬ್ ರನ್ನರ್ಅಪ್ ಆಯಿತು. ಖೋ-ಖೋದಲ್ಲಿ ನಾಗಲಾಪುರ ಯುವಕ ಸಂಘ ವಿಜೇತರಾದರೆ, ಬಜರಂಗಿ ಬಾಯ್ಸ್, ನಾಗಲಾಪುರ ರನ್ನರ್ಅಪ್ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಎ. ರಂಗಪ್ಪ, ಕಾಂಗ್ರೆಸ್ ಮುಖಂಡರು ಹಾಗೂ ಟಿ. ಎಂ. ಮಹೇಶ್, ಕಾಂಗ್ರೆಸ್ ಮುಖಂಡರು, ಯುವಜನರಲ್ಲಿ ಶಿಸ್ತು, ತಂಡದ ಮನೋಭಾವ, ಆತ್ಮವಿಶ್ವಾಸ ಹಾಗೂ ಸಮಗ್ರ ಅಭಿವೃದ್ಧಿಯನ್ನು ಬೆಳೆಸುವಲ್ಲಿ ಕ್ರೀಡೆಯ ಮಹತ್ವವನ್ನು ವಿವರಿಸಿದರು. ಜೆಎಸ್ಡಬ್ಲ್ಯೂ ಫೌಂಡೇಶನ್ನ ಕ್ರೀಡಾ ಅಧಿಕಾರಿಯಾದ ಮಹಮ್ಮದ್ ರಫೀಕ್ ಅವರು ಗ್ರಾಮೀಣ ಕ್ರೀಡೆಗಳನ್ನು ಬಲಪಡಿಸುವ ಹಾಗೂ ಯುವ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಫೌಂಡೇಶನ್ನ ವಿವಿಧ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಮುಖಂಡರು ಹಾಗೂ ಸಮುದಾಯದ ಪ್ರತಿನಿಧಿಗಳಾದ ಟಿ. ಜಿ. ಪಂಪಾಪತಿ ಮತ್ತು ತಿಮ್ಮಪ್ಪ ಸೇರಿದಂತೆ ಬಾಲ ಗಜಾನನ ಯುವಕ ಸಂಘದ ಕಿರಿಯ ಹಾಗೂ ಹಿರಿಯ ಆಟಗಾರರು ಭಾಗವಹಿಸಿದ್ದರು. ಗಣ್ಯರು ಭಾಗವಹಿಸಿದ ಎಲ್ಲಾ ತಂಡಗಳನ್ನು ಅಭಿನಂದಿಸಿ, ವಿಜೇತರು, ರನ್ನರ್ಅಪ್ಗಳು ಹಾಗೂ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಟ್ರೋಫಿ, ಕಪ್ ಮತ್ತು ಪದಕಗಳೊಂದಿಗೆ ಗೌರವಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande