ಪುದುಚೇರಿ ಪೊಲೀಸರಿಗೆ ರಾಷ್ಟ್ರಪತಿ ಪೊಲೀಸ್ ಪದಕ ಗೌರವ
ಪುದುಚೇರಿ, 09 ಆಗಸ್ಟ್ (ಹಿ.ಸ.): ಆ್ಯಂಕರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಪುದುಚೇರಿ ಪೊಲೀಸರಿಗೆ ಪ್ರತಿಷ್ಠಿತ ‘ರಾಷ್ಟ್ರಪತಿ ಪೊಲೀಸ್ ಪದಕ’ವನ್ನು ಪ್ರದಾನ ಮಾಡಿದರು. ಗೋರಿಮೇಡು ಪೊಲೀಸ್ ತರಬೇತಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಉಪರಾಜ್ಯಪಾಲ ಕೆ. ಕೈಲಾಶನಾಥನ್, ಮುಖ್ಯಮಂತ್ರಿ ಎನ್.
गृहमंत्री अमित शाह पुडुचेरी में संबोधित करते हुए।


ಪುದುಚೇರಿ, 09 ಆಗಸ್ಟ್ (ಹಿ.ಸ.):

ಆ್ಯಂಕರ್:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಪುದುಚೇರಿ ಪೊಲೀಸರಿಗೆ ಪ್ರತಿಷ್ಠಿತ ‘ರಾಷ್ಟ್ರಪತಿ ಪೊಲೀಸ್ ಪದಕ’ವನ್ನು ಪ್ರದಾನ ಮಾಡಿದರು. ಗೋರಿಮೇಡು ಪೊಲೀಸ್ ತರಬೇತಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಉಪರಾಜ್ಯಪಾಲ ಕೆ. ಕೈಲಾಶನಾಥನ್, ಮುಖ್ಯಮಂತ್ರಿ ಎನ್. ರಂಗಸಾಮಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಪೊಲೀಸ್ ಪಡೆಯ ವೃತ್ತಿಪರ ಸಾಮರ್ಥ್ಯ, ಧೈರ್ಯ, ಶಿಸ್ತು ಹಾಗೂ ಜನಸೇವೆಗೆ ನೀಡುವ ರಾಷ್ಟ್ರೀಯ ಮಾನ್ಯತೆಯ ಸಂಕೇತವಾಗಿ ರಾಷ್ಟ್ರಪತಿ ಪೊಲೀಸ್ ಪದಕವನ್ನು ಪರಿಗಣಿಸಲಾಗುತ್ತದೆ. ಈ ಗೌರವ ಪಡೆದ ದೇಶದ ಆಯ್ದ ಪೊಲೀಸ್ ಪಡೆಗಳ ಪಟ್ಟಿಗೆ ಪುದುಚೇರಿ ಪೊಲೀಸ್ ಸೇರ್ಪಡೆಯಾಗಿದೆ ಎಂದು ಅಮಿತ್ ಶಾ ಹೇಳಿದರು.

2014ರಿಂದ 2026ರವರೆಗೆ ಕೇಂದ್ರ ಸರ್ಕಾರ ಪುದುಚೇರಿಯ ಅಭಿವೃದ್ಧಿಗೆ ₹13,762 ಕೋಟಿ ಅನುದಾನ ನೀಡಿದ್ದು, 1950ರಿಂದ 2014ರವರೆಗೆ ₹3,500 ಕೋಟಿ ಮಾತ್ರ ನೀಡಲಾಗಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿ ಪುದುಚೇರಿಯಲ್ಲಿ ₹39 ಸಾವಿರ ಕೋಟಿ ಕೈಗಾರಿಕಾ ಹೂಡಿಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಿದೆ ಎಂದು ಅವರು ತಿಳಿಸಿದರು.

ಲಖ್ಪತಿ ದೀದಿ, ಜಲ ಜೀವನ್ ಮಿಷನ್, ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಉಚಿತ ಪಡಿತರ ಹಾಗೂ ನೇರ ಹಣ ವರ್ಗಾವಣೆ ಸೇರಿದಂತೆ ಹಲವು ಕೇಂದ್ರ ಯೋಜನೆಗಳಿಂದ ಪುದುಚೇರಿಯ ಜನರು ಪ್ರಯೋಜನ ಪಡೆದಿದ್ದಾರೆ ಎಂದು ಶಾ ಹೇಳಿದರು.

ಬ್ರಿಟಿಷರ ಕಾಲದ ದಂಡ ಸಂಹಿತೆಗೆ ಬದಲಾಗಿ ಮೂರು ಹೊಸ ಅಪರಾಧ ಕಾನೂನುಗಳನ್ನು ಜಾರಿಗೆ ತರಲಾಗಿದ್ದು, ತಂತ್ರಜ್ಞಾನ, ಕಾಲಮಿತಿ ಮತ್ತು ವಿಶ್ವಾಸದ ಮೂರು ಸ್ತಂಭಗಳ ಆಧಾರದ ಮೇಲೆ ನಾಗರಿಕರಿಗೆ ತ್ವರಿತ ನ್ಯಾಯ ಒದಗಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande