
ಜಮ್ಮು, ಜುಲೈ 29 (ಹಿ.ಸ.):
ಆ್ಯಂಕರ್:
ವಾರ್ಷಿಕ ಅಮರನಾಥ ಯಾತ್ರೆಯ 22ನೇ ತಂಡ ಬುಧವಾರ ಮುಂಜಾನೆ ಜಮ್ಮುವಿನ ಭಗವತಿ ನಗರ ಯಾತ್ರಿಕರ ನಿವಾಸದಿಂದ ಬಿಗಿ ಭದ್ರತೆಯ ನಡುವೆ ಬಾಲ್ತಾಲ್ ಮೂಲ ಶಿಬಿರದತ್ತ ಪ್ರಯಾಣ ಬೆಳೆಸಿತು.
82 ವಾಹನಗಳ ಬೆಂಗಾವಲಿನಲ್ಲಿ ಹೊರಟ ಈ ತಂಡದಲ್ಲಿ 2,051 ಯಾತ್ರಿಕರಿದ್ದು, 1,570 ಪುರುಷರು, 369 ಮಹಿಳೆಯರು, ಇಬ್ಬರು ಮಕ್ಕಳು, 58 ಸಾಧುಗಳು, 21 ಸಾಧ್ವಿಯರು, ಒಬ್ಬ ಸಾಧು ಬಾಲಕ ಹಾಗೂ 30 ವಿದೇಶಿ ಯಾತ್ರಿಕರು (14 ಪುರುಷರು ಮತ್ತು 16 ಮಹಿಳೆಯರು) ಸೇರಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಹಲ್ಗಾಮ್ ಮಾರ್ಗದಲ್ಲಿ ಯಾತ್ರಿಕರ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಎಲ್ಲಾ ಯಾತ್ರಿಕರು ಬಾಲ್ತಾಲ್ ಮಾರ್ಗದ ಮೂಲಕವೇ ಪವಿತ್ರ ಅಮರನಾಥ ಗುಹೆಯತ್ತ ತೆರಳುತ್ತಿದ್ದಾರೆ.
ಈ ತಂಡದ ನಿರ್ಗಮನದೊಂದಿಗೆ, ಪ್ರಸಕ್ತ ವರ್ಷದ ಅಮರನಾಥ ಯಾತ್ರೆಯಲ್ಲಿ ಜಮ್ಮು ಮೂಲ ಶಿಬಿರದಿಂದ ಇದುವರೆಗೆ ಒಟ್ಟು 1,32,406 ಯಾತ್ರಿಕರು ಪವಿತ್ರ ಗುಹಾ ದೇವಾಲಯದತ್ತ ಪ್ರಯಾಣ ಬೆಳೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.