ರಕ್ತಕ್ಕೆ ಯಾವುದೇ ಜಾತಿ, ಮತ, ಭೇದಗಳಿಲ್ಲ : ವಿಜಯೇಂದ್ರ
ಬೆಂಗಳೂರು, 14 ಜೂನ್ (ಹಿ.ಸ.) : ಆ್ಯಂಕರ್ : ರಕ್ತಕ್ಕೆ ಯಾವುದೇ ಜಾತಿ, ಮತ, ಭೇದಗಳಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ವಿಶ್ವ ರಕ್ತದಾನ ದಿನದ ಅಂಗವಾಗಿ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಅದು ಕೇವಲ ಮಾನವೀಯತೆಯ ಸಂಕೇತ. ಕೋಟ್ಯಂತರ ಜೀವಗಳನ್ನು ಸಕಾಲದಲ್ಲಿ ಉಳಿಸುವ
Byv post


ಬೆಂಗಳೂರು, 14 ಜೂನ್ (ಹಿ.ಸ.) :

ಆ್ಯಂಕರ್ : ರಕ್ತಕ್ಕೆ ಯಾವುದೇ ಜಾತಿ, ಮತ, ಭೇದಗಳಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ವಿಶ್ವ ರಕ್ತದಾನ ದಿನದ ಅಂಗವಾಗಿ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಅದು ಕೇವಲ ಮಾನವೀಯತೆಯ ಸಂಕೇತ. ಕೋಟ್ಯಂತರ ಜೀವಗಳನ್ನು ಸಕಾಲದಲ್ಲಿ ಉಳಿಸುವಲ್ಲಿ ರಕ್ತದಾನಿಗಳ ಪಾತ್ರ ಅತ್ಯಂತ ಶ್ರೇಷ್ಠವಾದದ್ದು.

ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಅದನ್ನು ಮತ್ತೊಬ್ಬ ಮಾನವನೇ ನೀಡಬೇಕಾಗಿದೆ. ಹಾಗಾಗಿ, ಆರೋಗ್ಯವಂತರು ಸ್ವಯಂಪ್ರೇರಿತರಾಗಿ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಈ ಮಹತ್ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande